ಬೆಂಗಳೂರು : ಪ್ರಜ್ವಲ್ ಗೆಲ್ಲುವ ಮುನ್ಸೂಚನೆ ಸಿಗ್ತಿದ್ದಂತೆ SITಗೆ ಟೆನ್ಷನ್ ಶುರುವಾಗಿದೆ. ರಿಸಲ್ಟ್ ಬರುವ ಮುನ್ನವೇ ಸ್ಥಳ ಮಹಜರ್ ನಡೆಸಲು ಪ್ಲಾನ್ ಮಾಡಿರುವ ಎಸ್ಐಟಿ ಯಾವುದೇ ಕ್ಷಣದಲ್ಲಿ ಪ್ರಜ್ವಲ್ ರೇವಣ್ಣರನ್ನು ಹಾಸನಕ್ಕೆ ಕರೆದೊಯ್ದು ಮಹಜರ್ ಪ್ರಕ್ರಿಯೆ ಮುಗಿಸಲು ತಯಾರಿ ನಡೆಸಿದೆ.
ನಾಳೆ ಲೋಕಸಭೆ ರಿಸಲ್ಟ್ ಹೊರ ಬೀಳುವ ಹಿನ್ನೆಲೆ ಇಂದೇ ಮಹಜರ್ ಪ್ರಕ್ರಿಯೆ ಮುಗಿಸಲು ತಯಾರಿ ನಡೆಸಿರುವ SIT, CID ಕಚೇರಿಯಿಂದ ಪ್ರಜ್ವಲ್ ರೇವಣ್ಣನನ್ನು ಹಾಸನಕ್ಕೆ ಕರೆದೊಯ್ಯಲಿದೆ. ಬಳಿಕ ಸಂತ್ರಸ್ತೆಯರು ದೂರಿನಲ್ಲಿ ಹೇಳಿರುವ ಸ್ಥಳಗಳಲ್ಲಿ ಮಹಜರ್ ಮಾಡಲಿದೆ.
ಸಂತ್ರಸ್ತೆಯ ದೂರಿನ ಮೇರೆಗೆ ಹೊಳೆ ನರಸೀಪುರದಲ್ಲಿರುವ ಮನೆ, ಹಾಸನದ ಗೆಸ್ಟ್ಹೌಸ್ ಹಾಗೂ ಸಂಸದರ ನಿವಾಸಗಳಲ್ಲಿ ಸ್ಥಳ ಪರಿಶೀಲನೆ ಮಾಡಲಿದೆ. ಈಗಾಗಲೇ ಹಾಲಿ ಹಾಸನ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಬಂಧನದ ಮಾಹಿತಿಯನ್ನು ಲೋಕಸಭೆ ಸ್ಪೀಕರ್ಗೆ ಇ-ಮೇಲ್, ಕರ್ನಾಟಕ ಭವನ ರೆಸಿಡೆಂಟ್ ಕಮಿಷನರ್ ಮೂಲಕ ರವಾನೆ ಮಾಡಲಾಗಿದೆ.
ಇದನ್ನೂ ಓದಿ : ಬೆಂಗಳೂರಿಗರೇ ಇಂದೂ ಅಬ್ಬರಿಸುತ್ತೆ ಮಳೆ – ಮರದ ಕೆಳಗೆ ಬೈಕ್, ಕಾರು ನಿಲ್ಲಿಸೋ ಮುನ್ನ ಎಚ್ಚರ..!