Download Our App

Follow us

Home » ರಾಜಕೀಯ » ಮಾಜಿ ಸಿಎಂ ಹೆಚ್​​ಡಿಕೆ ಹೆಣ್ಣುಮಕ್ಕಳಿಗೆ ಅವಮಾನಿಸಿದ್ದಾರೆ, ಅವರ ಹೇಳಿಕೆಗೆ ಕ್ಷಮೆಯೇ ಇಲ್ಲ – ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ..!

ಮಾಜಿ ಸಿಎಂ ಹೆಚ್​​ಡಿಕೆ ಹೆಣ್ಣುಮಕ್ಕಳಿಗೆ ಅವಮಾನಿಸಿದ್ದಾರೆ, ಅವರ ಹೇಳಿಕೆಗೆ ಕ್ಷಮೆಯೇ ಇಲ್ಲ – ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ..!

ಮಡಿಕೇರಿ : 5 ಗ್ಯಾರಂಟಿಯಿಂದ ಹೆಣ್ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ನೀಡಿ ಮಾಜಿ ಸಿಎಂ ಹೆಚ್​ಡಿಕೆ ಹೆಣ್ಣುಮಕ್ಕಳನ್ನು ಅವಮಾನಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ನನಗೆ ನೋವಾಗಿದೆ. ಹೆಣ್ಣುಮಕ್ಕಳನ್ನು ಗೌರವಿಸುವುದು, ಪೂಜಿಸುವುದು ನಮ್ಮ ಸಂಸ್ಕೃತಿ ಎಂದು ಹೆಚ್​ಡಿಕೆ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮಡಿಕೇರಿಯಲ್ಲಿ ಮಾಜಿ ಸಿಎಂ ಎಚ್​ಡಿಕೆ ವಿರುದ್ದ ಗುಡುಗಿದ ಡಿಕೆ ಶಿವಕುಮಾರ್ ಅವರು, ಈ ದಿನ ನನಗೆ ಅತ್ಯಂತ ದುಃಖ ತಂದ ದಿನ. ಮಾಜಿ ಪ್ರಧಾನಿಗಳ ಸುಪುತ್ರರು, ಎನ್‌ಡಿಎ ಪಾರ್ಟ್ನರ್ ಗ್ಯಾರಂಟಿ ಯೋಜನೆಯಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಹೆಣ್ಮಕ್ಕಳಿಗೆ ಅಲ್ಲ.. ಮಾನವ ಕುಲಕ್ಕೇ ದೊಡ್ಡ ಅವಮಾನ. ಇಂತಹ ವ್ಯಕ್ತಿಯನ್ನ ಎನ್‌ಡಿಎ ನಲ್ಲಿ ಹೇಗೆ ಇಟ್ಕೊತೀರಾ..? ಎಂದು  ಪ್ರಧಾನಿ ಮೋದಿಯವರನ್ನ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ತೀರ್ಥ ಯಾತ್ರೆಗೆ ಹೋಗೋರು ದಾರಿ ತಪ್ಪುತ್ತಿದ್ದಾರಾ..? ತವರಿಗೆ ಹೋಗುವ ಹೆಣ್ಮಕ್ಕಳು ದಾರಿ ತಪ್ಪುತ್ತಿದ್ದಾರಾ..? ನಾನು ಹೆಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದಿಲ್ಲ. ಹೆಣ್ಮಕ್ಕಳು ತಾಳ್ಮೆ ಕಳೆದುಕೊಳ್ಳಬೇಡಿ, ಹೋರಾಟ ಮಾಡಿ. ಹೆಚ್​ಡಿಕೆ ಹೇಳಿಕೆಗೆ ಕ್ಷಮೆಯೇ ಇಲ್ಲ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಇದನ್ನೂ ಓದಿ :  ಪ್ರಣಾಳಿಕೆಯನ್ನು ಈಡೇರಿಸುವ ಶಕ್ತಿ ಬಿಜೆಪಿಗಿಲ್ಲ, ಬಿಜೆಪಿಯದ್ದು ಕೇವಲ ಪೊಳ್ಳು ಭರವಸೆಗಳಷ್ಟೇ – ಸಿಎಂ ಸಿದ್ದರಾಮಯ್ಯ ವ್ಯಂಗ್ಯ..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here