ಬೆಂಗಳೂರು : ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಪ್ರಚಾರ ನಡೆದಿದೆ. ಮುಸ್ಲಿಂ ವೋಟು ಸಾಕು ಎಂಬಂತೆ ಪೇಪರ್ನಲ್ಲಿ ವರದಿಯಾಗಿರೋ ತರ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ಮಾಡಿರುವ ವರದಿಯಲ್ಲಿ ಹಿಂದೂಗಳ ವೋಟ್ ಅವಶ್ಯಕತೆ ಇಲ್ಲ, ಮುಸ್ಲಿಂ ವೋಟುಗಳು ನಮಗೆ ಸಾಕು ಅನ್ನೋ ಹೇಳಿಕೆಯಿದೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾಗಾಗಿ ಪೋಸ್ಟ್ ಮಾಡಿದವರ ವಿರುದ್ಧ ಕಾಂಗ್ರೆಸ್ ಕಾನೂನು ಘಟಕದ ಹರೀಶ್ ನಾಗರಾಜು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸೃಷ್ಟಿತ ಮಾಧ್ಯಮ ವರದಿಯನ್ನು ಪೋಸ್ಟ್ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳು ಪತ್ರಿಕೆಯ ವರದಿಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಇರುವ ಫೋಟೋವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಈ ದೂರಿನಲ್ಲಿ ಟ್ವಿಟ್ಟರ್, ವಾಟ್ಸಾಪ್ ಹಾಗೂ ಫೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಗಳ ವಿರುದ್ಧ ನಕಲಿ ಸೃಷ್ಟಿತ ಮಾಧ್ಯಮ ವರದಿಯನ್ನು ಶೇರ್ ಮಾಡಿರುವ ವಸಂತ್ ಗಿಳಿಯ ಪಾಂಡು(ಮೋದಿ ಪರಿವಾರ) ಬಿಎಸ್ವೈ ಸಪೋರ್ಟರ್ಸ್ ಬಿಜೆಪಿ ದಾವಣಗೆರೆ ಮತ್ತು ರಾತ್ರಿ ಗೋಶಾಲೆಗಳು ವಾಟ್ಸಾಪ್ ಗುಂಪಿನ ಅಡ್ಮಿನ್ಗಳ ವಿರುದ್ಧ ಕಾನೂನು ಕ್ರಮ ಕೋರಿ ದೂರು ನೀಡಿದ್ದಾರೆ.
ಪ್ರಕಟವಾದ ಪತ್ರಿಕೆಯಲ್ಲಿ “ಹಿಂದೂಗಳ ಅಗತ್ಯ ನಮಗೆ ಬೇಡ ಮುಸ್ಲಿಮರ ವೋಟ್ ಸಾಕು ಮಂದಿನ ಜನ್ಮದಲ್ಲಿ ಮುಸ್ಲಿಮರಾಗಿ ಹುಟ್ಟುತ್ತೇನೆ. ಮುಸ್ಲಿಮರ ಓಲೈಕೆಯ ಕುರಿತು ಬಿಜೆಪಿಯವರ ಟೀಕೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ” ಎಂದು ವರದಿಯಾಗಿದೆ.
ಇದನ್ನೂ ಓದಿ : 4 ಕ್ಷೇತ್ರ ಅಲ್ಲ 28 ಕ್ಷೇತ್ರದಲ್ಲೂ ನಮ್ಮದೇ ಗೆಲುವು : ಡಿಕೆಶಿ ವಿರುದ್ಧ ಹೆಚ್ಡಿಕೆ ಕಿಡಿ..!