ಬೀದರ್ : ನಕಲಿ ಪೊಲೀಸರ ಸೋಗಿನಲ್ಲಿ ಬಂದು ಕಳ್ಳತನ ಮಾಡಿದ್ದ ಮೂವರನ್ನು ಬೀದರ್ನ ಬಸವಕಲ್ಯಾಣ ನಗರ ಠಾಣೆ ಪೋಲಿಸರು ಬಂಧಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಚಿನ್ನದ ವ್ಯಾಪಾರಿಯೋರ್ವ ತನ್ನ ಸಿಬ್ಬಂದಿ ಬಳಿ 21 ಲಕ್ಷ ರೂಪಾಯಿ ಮೌಲ್ಯದ 80 ಸಾವಿರ ವಿದೇಶಿ ಕರೆನ್ಸಿ ಕೊಟ್ಟು ಚಿನ್ನ ತರಲು ಕಳುಹಿಸಿದ್ದ. ಸಿಬ್ಬಂದಿ ವಿದೇಶಿ ಕರೆನ್ಸಿಯನ್ನು ತೆಗೆದುಕೊಂಡು ಬಸ್ನಲ್ಲಿ ಹೋಗುತ್ತಿದ್ದನು.
ಈ ಮಾಹಿತಿಯನ್ನು ತಿಳಿದಿದ್ದ ಚಾಲಾಕಿ ಕದೀಮರು, ಪೊಲೀಸರ ಸೋಗಿನಲ್ಲಿ ಹೋಗಿ ಬಸ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಬಳಿಕ ಕಳ್ಳರು ಅಗತ್ಯಕಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋಗುತ್ತಿದ್ದೀಯಾ ಎಂದು ಸಿಬ್ಬಂದಿ ಬಳಿ ಇದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಇನ್ನು ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 21ಲಕ್ಷ ರೂ.ಮೌಲ್ಯದ ಅಮೇರಿಕನ್ ಡಾಲರ್ ಸೇರಿದಂತೆ ಇನ್ನಿತರ ವಿದೇಶಿ ಕರೆನ್ಸಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ರಾಜ್ಯದ ಸಮಸ್ತ ಪೊಲೀಸ್ ಸಿಬ್ಬಂದಿಗಳಿಗೆ “ಪೊಲೀಸ್ ಧ್ವಜ ದಿನದ” ಶುಭಾಶಯ ತಿಳಿಸಿದ ಲಾಫಿಂಗ್ ಬುದ್ಧ ಚಿತ್ರತಂಡ..!