Download Our App

Follow us

Home » ಸಿನಿಮಾ » ಸಿನಿಮಾ ಇಂಡಸ್ಟ್ರಿ ಇಷ್ಟ ಆಗ್ತಿಲ್ಲ, ರಾಜಕೀಯಕ್ಕೆ ಎಂಟ್ರಿ ಕೊಡ್ಬೇಕು ಅಂದ್ಕೊಂಡಿದ್ದೀನಿ – ಸೋನು ಶ್ರೀನಿವಾಸ್ ಗೌಡ..!

ಸಿನಿಮಾ ಇಂಡಸ್ಟ್ರಿ ಇಷ್ಟ ಆಗ್ತಿಲ್ಲ, ರಾಜಕೀಯಕ್ಕೆ ಎಂಟ್ರಿ ಕೊಡ್ಬೇಕು ಅಂದ್ಕೊಂಡಿದ್ದೀನಿ – ಸೋನು ಶ್ರೀನಿವಾಸ್ ಗೌಡ..!

ಟಿಕ್​ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದು, ಕೆಲವು ದಿನಗಳ ಹಿಂದೆ ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದರು. ಇದೀಗ ಜೈಲಿನಿಂದಲು ಹೊರಗೆ ಬಂದಿರುವ ಸೋನು ಶ್ರೀನಿವಾಸ್ ಗೌಡ ಅವರು ದಿನದಿಂದ ದಿನಕ್ಕೆ ತಮಗೆ ಬರುವ ಪರ್ಸನಲ್ ಮೆಸೇಜ್‌ಗಳು ಹೆಚ್ಚಾಗುತ್ತಿದೆ ಎಂದು ಯುಟ್ಯೂಬ್ ವಿಡಿಯೋ ಮೂಲಕ ಜನರು ಕೇಳಿರುವ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.

ಹೌದು, ಸೋನು ಶ್ರೀನಿವಾಸ್ ಗೌಡ ಜೈಲಿನಿಂದ ಹೊರ ಬಂದ ಮೇಲೆ ಭಾರೀ ಸುದ್ದಿಯಲ್ಲಿದ್ದು, ಅವರಿಗೆ ಫ್ಯಾನ್ಸ್‌ ಕೂಡ ಹೆಚ್ಚಾಗಿದ್ದಾರೆ. ಇದೀಗ ಸೋನು ಅವರು ಅವರಿಗೆ ಬಂದಿರುವ ಪರ್ಸನಲ್ ಮೆಸೇಜ್‌ಗಳಿಗೆ ಉತ್ತರ ನೀಡಿದ್ದಾರೆ. ಸುಮಾರು 27 ನಿಮಿಷಗಳ ವಿಡಿಯೋ ಇದಾಗಿದ್ದು, ಅದರ ಸಾರಾಂಶ ಇಲ್ಲಿದೆ.

‘ನಾನು ಇನ್ಫ್ಲೂಯನ್ಸರ್‌ ಅಲ್ಲ. ನಾನು ಆಕ್ಟರ್. ಡಿಪ್ಲಮೋ ಮುಗಿಸಿ ಇಂಜಿನಿಯರಿಂಗ್ ಮಾಡುವಾಗ ಅರ್ಧಕ್ಕೆ ನಿಲ್ಲಿಸಿರುವೆ. ಈ ಯುಟ್ಯೂಬ್‌ ವ್ಲಾಗ್ ಮಾಡಿಕೊಂಡು ದಿನ ಕಳೆಯುತ್ತಿರುವೆ. ನನಗೆ ಶಾರ್ಟ್‌ ಮೂವಿಗಳನ್ನು ಮಾಡುವುದಕ್ಕೆ ಇಷ್ಟವಿಲ್ಲ. ಅದಕ್ಕೆ ಸ್ಪಷ್ಟವಾಗಿರುವ ಕಾರಣವೂ ಇಲ್ಲ.

ಈ ಪ್ರಪಂಚದಲ್ಲಿ ಒಳ್ಳತನಕ್ಕೆ ಬೆಲೆ ಇಲ್ಲ ನಾನು ಒಳ್ಳೆ ಕೆಲಸ ಮಾಡಿದಕ್ಕೆ ಜೈಲಿಗೆ ಹೋಗಿ ಬಂದಿದ್ದು, ನನ್ನ ಪರಿಸ್ಥಿತಿಯನ್ನು ಎಲ್ಲರೂ ನೋಡಿರುತ್ತೀರಾ. 30 ವರ್ಷದ ಒಳಗೆ ನಾನು ನಾಯಕಿ ಆಗಬೇಕು ಅಂತ ಮೊದಲು ಇಷ್ಟ ಪಟ್ಟಿದ್ದೆ ಆದರೆ ಈಗ ಇಂಡಸ್ಟ್ರಿನೂ ಇಷ್ಟ ಆಗುತ್ತಿಲ್ಲ. ರಾಜಕೀಯದಲ್ಲಿ ಬ್ಯುಸಿಯಾಗಬೇಕು ಅಂದುಕೊಂಡಿರುವೆ. ದೇವರ ಆಟದ ಮುಂದೆ ನಾನು ಏನೂ ಪ್ಲ್ಯಾನ್ ಮಾಡಲು ಆಗಲ್ಲ.

‘ನನ್ನ ಮದುವೆ ಯಾವಾಗ ಅಂತ ಗೊತ್ತಿಲ್ಲ ನನಗೆ ಮದುವೆ ಆಗಲು ಆಸೆನೂ ಇಲ್ಲ. ಹುಡುಗ ಹೇಗಿರಬೇಕು ಅಂದ್ರೆ ಯಾವ ಬಣ್ಣ ಇದ್ರೂ ಪರ್ವಾಗಿಲ್ಲ ಅವರಲ್ಲಿ ನಂಬಿಕೆ ಇಡಬೇಕು. ನಮ್ಮಿಬ್ಬರ ನಡುವೆ ಗೌರವ ಹೆಚ್ಚಿರಬೇಕು. ರಾಜಕೀಯಕ್ಕೆ ಹೋಗಬೇಕು ಅನ್ನೋದು ಅಷ್ಟೇ ನನ್ನ ಪ್ಲ್ಯಾನ್. ನನ್ನ ಮನೆಯಲ್ಲಿ ನನ್ನ ಜೊತೆ ಇಬ್ಬರು ಕಸಿಬ್ ಅಣ್ಣ-ತಮ್ಮ ಇದ್ದಾರೆ ಏಕೆಂದರೆ ಜನವರಿಯಿಂದ ಊರಿನಲ್ಲಿ ಮನೆ ಕಟ್ಟಿಸುತ್ತಿದ್ದೀವಿ ಅದಿಕ್ಕೆ ಇಲ್ಲಿ ಇದ್ದಾರೆ. ಏನೇ ಕೆಲಸ ಇದ್ದರು ಸಹಾಯ ಮಾಡುತ್ತಾರೆ ಹಾಗೂ ಮನೆಯಲ್ಲಿ ಎರಡು ನಾಯಿ ಇರುವುದರಿಂದ ಯಾರಾದರೂ ಒಬ್ಬರು ಇರಬೇಕು. ಸೋಷಿಯಲ್ ಮೀಡಿಯಾದಲ್ಲಿ ಜನರು ಸಾವಿರ ಮಾತನಾಡುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ತಲೆ ಕೊಡುವುದಿಲ್ಲ ಎಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
                              

Leave a Comment

DG Ad

RELATED LATEST NEWS

Top Headlines

ಪ್ಲೀಸ್‌ ಒಂದು ಚಾನ್ಸ್​ ಕೊಡಿ ಬಿಗ್​ಬಾಸ್… ಜಗದೀಶ್, ರಂಜಿತ್ ಹೊರಹೋಗ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು..!

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆಯುತ್ತಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ

Live Cricket

Add Your Heading Text Here