ಯಾದಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ‘ಕೈ’ ಶಾಸಕರು ಫುಲ್ ಬ್ಯಾಟಿಂಗ್ ಮಾಡುತ್ತಿದ್ದು, ಇದೀಗ ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕಿಡಿ ಕಾರಿದ್ದಾರೆ.
ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೇಲ್ ಮೇಲೆ ಇಲ್ವಾ? ಯಡಿಯೂರಪ್ಪ ಅವ್ರನ್ನು ಭ್ರಷ್ಟಾಚಾರದಲ್ಲಿ ಅರೆಸ್ಟ್ ಮಾಡಿರಲಿಲ್ವಾ? ಅಶೋಕ್ ವಿರುದ್ಧ ಭೂ ಕಬಳಿಕೆ ಪ್ರಕರಣ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಹೆಚ್ಡಿಕೆ, ಬಿಎಸ್ವೈ ಸೇರಿ ಎಲ್ಲರೂ ಕಳ್ಳರೇ ಎಂದು ದರ್ಶನಾಪುರ ಆಕ್ರೋಶ ಹೊರ ಹಾಕಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಮಾತ್ನಾಡಲು ಯಾವ ನೈತಿಕತೆ ಇದೆ. ಸಿಎಂ ಆಗಲು 2500 ಕೋಟಿ ರೆಡಿ ಮಾಡಿದ್ದಾರೆ ಅಂತಾ ಯತ್ನಾಳ್ ಹೇಳಿಲ್ವಾ? ಇಂಥವರ ಜೊತೆ ನಮ್ಮ ನಾಯಕರನ್ನು ಹೋಲಿಸಬೇಡಿ ಎಂದು ಯಾದಗಿರಿಯಲ್ಲಿ ಶರಣಬಸಪ್ಪ ದರ್ಶನಾಪುರ ಗುಡುಗಿದ್ದಾರೆ.
ಇದನ್ನೂ ಓದಿ : ‘ನಿಮ್ಮ ನಡತೆ ಸರಿ ಇಲ್ಲ’ – ಗೋಲ್ಡ್ ಸುರೇಶ್ ನೇರ ಮಾತಿಗೆ ಐಶ್ವರ್ಯಾ ಕಣ್ಣೀರ ಧಾರೆ..!