Download Our App

Follow us

Home » ರಾಜಕೀಯ » ರಂಗೇರಿದ ಹಾಸನ ಚುನಾವಣಾ ಅಖಾಡ- ಮೊಮ್ಮಗನನ್ನು ಗೆಲ್ಲಿಸಲು ಅಖಾಡಕ್ಕಿಳಿದ ದೇವೇಗೌಡರು..!

ರಂಗೇರಿದ ಹಾಸನ ಚುನಾವಣಾ ಅಖಾಡ- ಮೊಮ್ಮಗನನ್ನು ಗೆಲ್ಲಿಸಲು ಅಖಾಡಕ್ಕಿಳಿದ ದೇವೇಗೌಡರು..!

ಹಾಸನ : ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿಕೂಟದಲ್ಲಿ ಜೆಡಿಎಸ್​ ಪಾಲಿಗೆ ಮೂರು ಲೋಕಸಭಾ ಕ್ಷೇತ್ರಗಳು ದೊರೆತಿದ್ದು, ಇದರ ಬೆನ್ನಲ್ಲೇ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮೂರೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಜೆಡಿಎಸ್ ನ ಮೂರು ಕ್ಷೇತ್ರಗಳಾದ ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್​ ರೇವಣ್ಣ ಅವರ ಹೆಸರು ಘೋಷಣೆಯಾಗಿದೆ. ಇದೀಗ ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರನ್ನು ಗೆಲ್ಲಿಸಲು HD ದೇವೇಗೌಡರು ಅಖಾಡಕ್ಕಿಳಿದಿದ್ದಾರೆ. ಮೊಮ್ಮಗ ಪ್ರಜ್ವಲ್​​ ರೇವಣ್ಣಗಾಗಿ ಹಾಸನದಲ್ಲಿ ಬೀಡುಬಿಟ್ಟಿರುವ ದೇವೇಗೌಡರು ಹಾಸನ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಸಭೆ ನಡೆಸುತ್ತಿದ್ದಾರೆ.

ಕಳೆದ ಎರಡು ವಾರಗಳಿಂದ ಹಾಸನದಲ್ಲೇ ಇರುವ ಮಾಜಿ ಪ್ರಧಾನಿ ದೇವೇಗೌಡರು ಪ್ರಜ್ವಲ್​ ಪರ ಕೆಲಸ ಮಾಡುವಂತೆ JDS​​​ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿನ ಕೆಲ ಅಸಮಾಧಾನ ಶಮನ ಮಾಡಲು ಇಂದು ಬೆಳಗ್ಗೆ ಸಾಲಗಾಮೆ ಗ್ರಾಮ, ಮೊಸಳೆ ಹೊಸಳ್ಳಿ ಗ್ರಾಮದಲ್ಲಿ JDS ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ತದನಂತರ ಸಂಜೆ ಹೊಳೆನರಸೀಪುರದ ಹದರನಹಳ್ಳಿಯಲ್ಲಿ ವಾಸ್ತವ್ಯ ಹೂಡುವ ಮೂಲಕ ಮೊಮ್ಮಗನ ಗೆಲುವಿಗಾಗಿ ದಾರಿ ಸುಗಮ ಮಾಡಲು ಕಸರತ್ತು ನಡೆಸಲಿದ್ದಾರೆ.

ಇದನ್ನೂ ಓದಿ : ಚುನಾವಣೆಗೆ ನಿಲ್ಲುವ ಹೆಣ್ಣು ಮಕ್ಕಳು ಅಡುಗೆ ಮನೆ ಸೇರಬೇಕಾ..? – ಶಾಮನೂರು ಅಡುಗೆ ಮನೆ ಹೇಳಿಕೆಗೆ ಸೈನಾ ನೆಹ್ವಾಲ್​​ ಕಿಡಿ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here