ಬೆಂಗಳೂರು : ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ದೇವೇಗೌಡರೇ ಮುಸ್ಲಿಂ ಮೀಸಲಾತಿ ತಂದಿದ್ದು ನೀವಾ..? ಪ್ರಧಾನಿ ಮೋದಿ ಮುಸ್ಲಿಂ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಮೋದಿಯವರ ಆಪ್ತಮಿತ್ರ, ಬಿಜೆಪಿ ಹೊಸ ಸಂಗಾತಿಗಳೇ ಈಗೇನೇಳ್ತೀರಾ..? ಎಂದು ಟ್ವೀಟ್-Xನಲ್ಲಿ ಸರಣಿ ಪ್ರಶ್ನೆ ಹಾಕಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ತಂದಿದ್ದೇ ನಾನು ಎನ್ನುವ ಗೌಡರೇ, ಈಗಲೂ ತಮ್ಮ ನಿಲುವಿಗೆ ಬದ್ಧರಾಗಿದ್ದಾರಾ? ಇಲ್ಲವೇ ಮೋದಿಗೆ ಶರಣಾಗಿ ನಿಮ್ಮ ಹಿಂದಿನ ನಿಲುವು ಬದಲಿಸ್ತೀರಾ..?
ರಾಜ್ಯದ ಜನತೆಗೆ ದೇವೇಗೌಡರು ಇದನ್ನು ಸ್ಪಷ್ಟಪಡಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸಾಧನೆ ಶೂನ್ಯ, ಇದೇ ಕಾರಣಕ್ಕೆ ಧರ್ಮದ ವಿಚಾರವನ್ನು ಕೆದಕಿ ಮತ ಕೇಳ್ತಿದ್ದಾರೆ. ಅಧಿಕಾರ, ಅವಕಾಶ, ಸಂಪತ್ತು ಎಲ್ಲ ಸಮುದಾಯಕ್ಕೆ ಹಂಚಿಕೆಯಾಗ್ಬೇಕು ಎಂದು ಟ್ವೀಟ್ನಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಮೇಲೆ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಇದನ್ನೂ ಓದಿ : ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ‘ಸಲಾರ್’ : ಪ್ರೇಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ..!