ರಾಯಚೂರು : ದೇವದುರ್ಗ JDS ಶಾಸಕಿ ಪುತ್ರ ಹಾಗೂ ಸಹಚರರು ಕರ್ತವ್ಯನಿರತ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಹೆಡ್ ಕಾನ್ಸ್ಟೇಬಲ್ ವಿರುದ್ಧ ಕೇಸ್ ದಾಖಲಿಸುವಂತೆ ಶಾಸಕಿ ಪಟ್ಟು ಹಿಡಿದಿದ್ದಾರೆ.
ಹಲ್ಲೆಗೊಳಗಾದ ಹೆಡ್ ಕಾನ್ಸ್ಟೇಬಲ್ ಹಣಮಂತ್ರಾಯನ ವಿರುದ್ಧ ಶಾಸಕಿ ದೂರು ನೀಡಿದ್ದು, ವಿನಾಃ ಕಾರಣ ನಮ್ಮಪುತ್ರನ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ನಾವು ಯಾವುದೇ ಮರಳು ಗಣಿಗಾರಿಕೆ ಮಾಡುತ್ತಿಲ್ಲ, ನಮ್ಮ ಹತ್ತಿರ ಯಾವುದೇ ಹಿಟಚಿ, ಟಿಪ್ಪರ್ ಇಲ್ಲ. ಹೇಗೆ ನಮ್ಮ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದೀರಾ? ಎಂದು ಹೇಳಿದ್ದಾರೆ. ತಕ್ಷಣ ಹೆಡ್ ಕಾನ್ಸ್ ಟೇಬಲ್ ಮೇಲೆ FIR ದಾಖಲಿಸುವಂತೆ ಕರೆಯಮ್ಮ ಜಿ ನಾಯಕ ತಾಕೀತು ಮಾಡಿದ್ದಾರೆ.
ಈ ಪ್ರಕರಣ ಸಂಬಂಧ ಪುತ್ರನ ಮೇಲೆ FIR ದಾಖಲಾಗ್ತಿದ್ದಂತೆ ಠಾಣೆ ಮುಂದೆ ಶಾಸಕಿ ಪ್ರೊಟೆಸ್ಟ್ ನಡೆಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ ಮುಂದೆ ಶಾಸಕಿ ಕರೆಮ್ಮ ಅಹೋರಾತ್ರಿ ಧರಣಿ ಕುಳಿತಿದ್ದು, ಈ ವೇಳೆ ಪೊಲೀಸರು ಉದ್ದೇಶ ಪೂರ್ವಕವಾಗಿ ಕೇಸ್ ದಾಖಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಪ್ತನನ್ನೂ ಬಂಧಿಸಿರೋದು ಶಾಸಕಿಯ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಕರೆಮ್ಮ ಕಿಡಿ ಕಾರಿದ್ದಾರೆ. ಹಾಗಾಗಿ ಶಾಸಕಿ ಧರಣಿಗೆ ಮಣಿದು ಪೊಲೀಸರು ಆಪ್ತ ಸಹಾಯಕನ ಬಿಟ್ಟು ಕಳಿಸಿದ್ದಾರೆ. ಸುಳ್ಳು ಆರೋಪ ಮಾಡಿದ ಕಾನ್ಸ್ಟೇಬಲ್ ಮೇಲೆ ಶಾಸಕಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಪ್ರಕರಣ ಸಂಬಂಧ ಶಾಸಕಿ ಪುತ್ರ ಹಾಗೂ ಆಪ್ತ ಸಹಾಯಕರನ್ನು ಸೇರಿ 8 ಜನರ ವಿರುದ್ಧ FIR ದಾಖಲಾಗಿದೆ.
ಪ್ರಕರಣ : ಕರ್ತವ್ಯನಿರತ ಹೆಡ್ ಕಾನ್ಸ್ಟೆಬಲ್ ಮೇಲೆ JDS ಶಾಸಕಿ ಪುತ್ರ ಹಲ್ಲೆ ಮಾಡಿದ್ದಾನೆ. ಅಕ್ರಮ ಮರಳಿನ ಟ್ರ್ಯಾಕ್ಟರ್ ತಡೆದಿದ್ದಕ್ಕೆ ದೇವದುರ್ಗ ಠಾಣೆ ಕಾನ್ಸ್ಟೇಬಲ್ ಹನುಮಂತ್ರಾಯ ಮೇಲೆ ಶಾಸಕಿ ಪುತ್ರ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹೊಡಿಬೇಡಿ ನಾನೇನು ತಪ್ಪು ಮಾಡಿಲ್ಲ ಎಂದು ಕಾನ್ಸ್ಟೇಬಲ್ ಹೇಳಿದ್ರೂ ಬಿಡದೆ, ದೇವದುರ್ಗ ಐಬಿಯ ಕೋಣೆಗೆ ಬೀಗ ಜಡಿದು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಹನುಮಂತ್ರಾಯಗೆ ಮನ ಬಂದಂತೆ ಹೊಡೆದಿದ್ದಾರೆ. ಶಾಸಕಿ ಆಪ್ತ ಸಹಾಯಕ ಇಲಿಯಾಸ್, ಜೆಡಿಎಸ್ ಮುಖಂಡರಿಂದಲೂ ಈ ಹಲ್ಲೆ ನಡೆದಿದೆ.
ಇದನ್ನೂ ಓದಿ : ಯೂಟ್ಯೂಬ್ ನೋಡಿ ಕಳ್ಳತನ ಮಾಡ್ತಿದ್ದ ಕಿಲಾಡಿ ಕಳ್ಳ ಅರೆಸ್ಟ್..!