ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಅನ್ನೋ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕರೆಸಿ ಹಲ್ಲೆ ಮಾಡಿ ಹತ್ಯೆಗೈದಿರೋ ಆರೋಪ ಕೇಳಿಬಂದಿದೆ. ಈ ಕೇಸ್ನಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಪೊಲೀಸರು ಟೆಕ್ನಿಕಲ್ ಎವೆಡೆನ್ಸ್ ಕಲೆ ಹಾಕ್ತಿದ್ದು ಅದರ ಆಧಾರದಲ್ಲಿ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.
ಈ ಬೆನ್ನಲ್ಲೇ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮೌನ ವಹಿಸಿದ್ದಾರೆ. ಈ ಘಟನೆ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ಇನ್ಸ್ಟಾಗ್ರಾಮ್ ಪ್ರೊಫೈಲ್ ಫೋಟೋನ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್ಫಾಲೋ ಮಾಡಿದ್ದಾರೆ. ಈ ನಡೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ನಿನ್ನೆ ದರ್ಶನ್ ಸುದ್ದಿ ಕೇಳಿ ವಿಜಯಲಕ್ಷ್ಮಿ ಮನಸ್ಸಿಗೆ ತುಂಬಾ ಅಘಾತವಾಗಿತ್ತು. ಪದೇ ಪದೇ ಏನಾಗ್ತಿದೆ ಅಂತ ಟಿವಿ ನೋಡಿ ವಿಜಯಲಕ್ಷ್ಮಿ ಅಪ್ ಡೇಟ್ ತೆಗೆದುಕೊಳ್ತಿದ್ರಂತೆ. ಮಗನಿಗೆ ಈ ವಿಷಯ ಗೊತ್ತಾಗಬಾರದು ಅಂತಾ ಕ್ಲೋಸ್ ಸರ್ಕಲ್ನಲ್ಲಿ ಹೇಳಿದ್ರು. ವಿಜಯ ಲಕ್ಷ್ಮಿ ನಿನ್ನೆಯಿಂದ ಅಳುತ್ತಾ ಕುಳಿತ್ತಿದ್ದರು. ಮಗನಿಗೋಸ್ಕರ ಬದುಕುತ್ತೇನೆ ಅಂತ ಹೇಳಿಕೊಂಡಿದ್ದಾರಂತೆ. ಇದೀಗ ಪವಿತ್ರಾಗಾಗಿ ದರ್ಶನ್ ಕೊಲೆ ಮಾಡಿದರು ಎನ್ನುವ ಕಾರಣಕ್ಕೆ ವಿಜಯಲಕ್ಷ್ಮಿ ಬೇಸರಗೊಂಡಿದ್ದಾರೆ. ಇದೇ ಕಾರಣಕ್ಕೆ ಇನ್ಸ್ಟಾಗ್ರಾಮ್ನಲ್ಲಿ ಪತಿ ದರ್ಶನ್ ಸೇರಿ ಎಲ್ಲರೂನ್ನು ಅನ್ಫಾಲೋ ಮಾಡಿದ್ದಾರೆ.
ಇದನ್ನೂ ಓದಿ : ನನ್ನ ಮಗನನ್ನು ಕೊಂದ ದರ್ಶನ್ ಕೂಡಾ ಸಾಯಬೇಕು : ರೇಣುಕಾಸ್ವಾಮಿ ತಾಯಿ ಹಿಡಿಶಾಪ..!