Download Our App

Follow us

Home » ಅಪರಾಧ » ನಟ ದರ್ಶನ್​ಗೆ ಮತ್ತೊಂದು ಕಂಟಕ : ರೀ ಓಪನ್ ಆಗುತ್ತಾ ಮ್ಯಾನೇಜರ್ ಸ್ಯೂಸೈಡ್ ಕೇಸ್?

ನಟ ದರ್ಶನ್​ಗೆ ಮತ್ತೊಂದು ಕಂಟಕ : ರೀ ಓಪನ್ ಆಗುತ್ತಾ ಮ್ಯಾನೇಜರ್ ಸ್ಯೂಸೈಡ್ ಕೇಸ್?

ಬೆಂಗಳೂರು :  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್​​, ಪವಿತ್ರಾಗೌಡ ಹಾಗೂ ಸಹಚರರು ಅರೆಸ್ಟ್​​ ಆಗಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಸದ್ಯ ಪೊಲೀಸ್​​ ಕಸ್ಟಡಿಯಲ್ಲಿರುವ ದರ್ಶನ್​​​ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದ್ದು, 2 ತಿಂಗಳ ಹಿಂದೆ ಸೂಸೈಡ್ ಮಾಡಿಕೊಂಡಿರೋ ಮ್ಯಾನೇಜರ್ ಕೇಸ್​​ ರೀ ಓಪನ್ ಆಗುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಆನೇಕಲ್​ನ ಬಗ್ಗನದೊಡ್ಡಿಯಲ್ಲಿ 2 ಎಕ್ರೆ 36 ಗುಂಟೆ ವಿಸ್ತೀರ್ಣದಲ್ಲಿ ದರ್ಶನ್​​ ಒಡೆತನದ ದುರ್ಗಾ ಹೆಸರಿನ ಫಾರ್ಮ್​ಹೌಸ್ ಇದ್ದು, ಈ ಫಾರ್ಮ್​ಹೌಸ್​​​ನಲ್ಲಿ 1 ವರ್ಷ ಮ್ಯಾನೇಜರ್ ಶ್ರೀಧರ್ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಮ್ಯಾನೇಜರ್ ಏಪ್ರಿಲ್ 17ನೇ ತಾರೀಖಿನಂದು ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದನು. ಫಾರ್ಮ್​ಹೌಸ್​ನ ಪಕ್ಕದ ಬಂಡೆ ಮೇಲೆ ರಕ್ತ ಕಕ್ಕಿರೋ ರೀತಿಯಲ್ಲಿ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಕಂಡು ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನು. ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿತ್ತು. 

ಆತ್ಮಹತ್ಯೆಗೆ ಶರಣಾಗಿದ್ದ ಶ್ರೀಧರ್ ಅವರ ಡೆತ್ ನೋಟ್ ಸಹ ಆ ಸಮಯದಲ್ಲಿ ಪತ್ತೆಯಾಗಿತ್ತು, ‘ನನ್ನ ಸಾವಿಗೆ ನಾನೇ ಕಾರಣ, ಒಂಟಿತನ ಕಾಡುತ್ತಿದೆ ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶ್ರೀಧರ್ ಬರೆದುಕೊಂಡಿದ್ದ. ಇನ್ನು ವಿಡಿಯೋದಲ್ಲಿ ನನ್ನ ಸಾವಿಗೆ ನಾನೇ ಕಾರಣ ಅಂತ 10 ಸಲ ಹೇಳಿದ್ದನು. ಮಾತ್ರವಲ್ಲದೇ ಡೆತ್​ನೋಟ್​ನಲ್ಲಿ ಸಹಿ ಮತ್ತು ಹೆಬ್ಬೆಟ್ಟು ಹಾಕಿದ್ದನು. ಈ ಕಾರಣದಿಂದ ಇದೀಗ ಮ್ಯಾನೇಜರ್ ಶ್ರೀಧರ್​​ ಸಾವಿನ ಬಗ್ಗೆ ಭಾರೀ ಅನುಮಾನ ಹುಟ್ಟಿಕೊಂಡಿದೆ.

ಹೆಂಡ್ತಿಗೆ ವಾಪಸ್ ಬರ್ತೀನಿ ಅಂತ ಹೋದವ್ನು ಆಗಿದ್ದೇನು? ಸಾಲ ಕಟ್ಟೋಕ್ಕೆ ದುಡ್ಡು ತರ್ತೀನಿ ಅಂತ ಹೋದವ್ನು ಕೊಲೆಯಾದ್ನಾ? ಆನೇಕಲ್ ದುರ್ಗಾ ಫಾರ್ಮ್​ಹೌಸ್​ನಲ್ಲಿ ಬೇರೆ ವ್ಯವಹಾರ ನಡೀತಿತ್ತಾ? ಫಾರ್ಮ್​ಹೌಸ್​ ಅವ್ಯವಹಾರಗಳು ಮ್ಯಾನೇಜರ್ ಶ್ರೀಧರ್​ಗೆ ಗೊತ್ತಿತ್ತಾ? ಈ ಕಾರಣಕ್ಕೆ ಬೆದರಿಸಿ ಶ್ರೀಧರ್​ನನ್ನು​​ ಕೊಂದ್ದಿದ್ದರಾ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ರಾ? ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿವೆ. ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಅವರ ಹಳೆಯ ಪ್ರಕರಣಗಳನ್ನು ಸಹ ಪೊಲೀಸರು ಜಾಲಾಡುತ್ತಿದ್ದು, ಶ್ರೀಧರ್ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಯುವ ಸಂಭವ ಇದೆ.

ಇದನ್ನೂ ಓದಿ : ದರ್ಶನ್​​​ ಕೇಸ್​ ತಾರ್ಕಿಕ ಅಂತ್ಯ ಆಗೋವರೆಗೂ ಬಿಡಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೇ ಕೊಡಿಸುತ್ತೇವೆ – ಪೊಲೀಸ್​ ಕಮಿಷನರ್​​ ಬಿ.ದಯಾನಂದ್..! 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here