ಬೆಂಗಳೂರು : ದರ್ಶನ್ ಕೇಸ್ ತಾರ್ಕಿಕ ಅಂತ್ಯ ಆಗೋವರೆಗೂ ಬಿಡಲ್ಲ, ರೇಣುಕಾಸ್ವಾಮಿಯನ್ನು ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೇ ಕೊಡಿಸುತ್ತೇವೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾತನಾಡಿ, ಇದು ಪೊಲೀಸರಿಂದಲೇ ಹೊರಬಂದ ಕರಾಳ ಸತ್ಯದ ಪ್ರಕರಣ. ಪ್ರಕರಣದ ತನಿಖೆಯನ್ನು ವಿಜಯನಗರ ACP ಚಂದನ್ ನಡೆಸುತ್ತಿದ್ದಾರೆ, ಪೊಲೀಸರ ಸಮಯ ಪ್ರಜ್ಞೆಯಿಂದ ಈ ಕೇಸ್ ಹೊರಬಂದಿದೆ. ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡಿದ್ದೇವೆ, FSL ಹಾಗೂ ಟೆಕ್ನಿಕಲ್ ಟೀಮನ್ನೂ ಕೂಡಾ ಸೇರಿಸಲಾಗಿದೆ ಎಂದಿದ್ದಾರೆ.
ಸಾಕ್ಷ್ಯಾಧಾರಗಳನ್ನೂ ಕೂಡಾ ಎಚ್ಚರಕೆಯಿಂದ ಸಂಗ್ರಹಿಸಿದ್ದೇವೆ, ಕೇಸ್ ತಾರ್ಕಿಕ ಅಂತ್ಯವಾಗಲು ಮಾಧ್ಯಮ ಸೇರಿ ಎಲ್ಲರ ಸಹಕಾರ ಅಗತ್ಯ. ಸೆಲಬ್ರೆಟಿಗಳ ಕೇಸ್ ಆಗಿರೋದ್ರಿಂದ ಸಾರ್ವಜನಿಕರಿಗೆ ಕುತೂಹಲ ಇದೆ, ನಾವು-ನೀವೂ ಎಲ್ಲಾ ಸೇರಿ ಕೆಲಸ ಮಾಡೋಣ ಎಂದು ಕಮಿಷನರ್ ಹೇಳಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ ಬಿ.ವೈ ವಿಜಯೇಂದ್ರ..!