Download Our App

Follow us

Home » ಅಪರಾಧ » ದರ್ಶನ್ ಅರೆಸ್ಟ್ ಕೇಸ್ : ಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು ಡೀಲ್ ರಹಸ್ಯ..!

ದರ್ಶನ್ ಅರೆಸ್ಟ್ ಕೇಸ್ : ಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು ಡೀಲ್ ರಹಸ್ಯ..!

ಬೆಂಗಳೂರು : ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಅನ್ನೋ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕರೆಸಿ ಹಲ್ಲೆ ಮಾಡಿ ಹತ್ಯೆಗೈದಿರೋ ಆರೋಪ ಕೇಳಿಬಂದಿದೆ. ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಇದೀಗ ಪೊಲೀಸರು ಟೆಕ್ನಿಕಲ್ ಎವೆಡೆನ್ಸ್ ಕಲೆ ಹಾಕ್ತಿದ್ದು ಅದರ ಆಧಾರದಲ್ಲಿ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಇದೀಗ ಪೊಲೀಸ್ ವಿಚಾರಣೆಯಲ್ಲಿ ಡೀಲ್ ರಹಸ್ಯ ಬಯಲಾಗಿದ್ದು, ಕೊಲೆ ನಡೆದ ನಂತರ ಪ್ರಕರಣದಲ್ಲಿ ಸರಂಡರ್ ಆಗಲು ದರ್ಶನ್ ಹುಡುಗರಿಗೆ ಡೀಲ್ ಕೊಟ್ಟಿದ್ದರು. ಆದರೆ ದರ್ಶನ್ ವಿರುದ್ಧವೇ ಆರೋಪಿಗಳು ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಕೊಲೆ ಮಾಡಿದ್ದು ನಾವೇ ಎಂದು ಸರಂಡರ್ ಆಗಲು 20 ಲಕ್ಷ ಹಣ ಕೊಟ್ಟು ಕೇಸ್ ನೋಡಿಕೊಳ್ಳೋದಾಗಿ ದರ್ಶನ್ ಹೇಳಿದ್ದರು ಎಂದು ಆರೋಪಿಗಳು ಹೇಳಿದ್ದಾರೆ.

ಕಳೆದ ಭಾನುವಾರ ಇವರ ಹೊಡೆತಕ್ಕೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದು, ನಂತರ ಡೆಡ್​​ಬಾಡಿಯನ್ನ ಏನು ಮಾಡೋದು? ಎಲ್ಲಿ ಬೀಸಾಕೋದು? ಈ ಸಂಬಂಧ ನಟ ದರ್ಶನ್ ಫುಲ್ ಟೆನ್ಷನ್ ಆಗಿದ್ದರು. ಕೂಡಲೇ ಎಲ್ಲಾದ್ರು ಏನಾದ್ರು ಮಾಡಿ, ನನ್ನ ಕುತ್ತಿಗೆಗೆ ಬರಬಾರದು ಎಂದಿದ್ದರಂತೆ ದರ್ಶನ್. ರೇಣುಕಾಸ್ವಾಮಿ ಡೆಡ್ ಬಾಡಿ ಮೂಟೆ ಕಟ್ಟಿ ಬೀಸಾಕಲು ಪ್ಲಾನ್ ಮಾಡಿ, ಸ್ಕಾರ್ಪಿಯೋ ಕಾರ್​​ನಲ್ಲಿ ಡೆಡ್ ಬಾಡಿ ಹಾಕಿಕೊಂಡು ಮಧ್ಯರಾತ್ರಿ ರಾಜಕಾಲುವೆಗೆ ಬೀಸಾಡಿದ್ದಾರೆ.

ನಂತರ ಭಾನುವಾರ ಡೆಡ್ ಬಾಡಿ ಪೊಲೀಸರಿಗೆ ಸಿಕ್ಕಿತ್ತು, ಆಗ ಕೇಸ್​​ನಲ್ಲಿ ಫಿಕ್ಸ್ ಆಗಲು ದರ್ಶನ್ ಡೀಲ್ ಕೊಟ್ಟಿದ್ದರು. ಸರಂಡರ್ ಆಗಲು, ಕೇಸ್ ನೋಡಿಕೊಳ್ಳಲು ಹುಡುಗರು ಹಣ ಫೀಕ್ಸ್ ಮಾಡಿದ್ದರಂತೆ. ತನ್ನ ಆಪ್ತ ವಿನಯ್ ಮೂಲಕ ದರ್ಶನ್ ಹುಡುಗರಿಗೆ 5 ಲಕ್ಷ ಹಣ ಕೊಡಿಸಿದ್ದ. ವಿಚಾರಣೆ ವೇಳೆ ಹುಡುಗರು ಕೊಲೆ ರಹಸ್ಯ ಬಾಯಿ ಬಿಡುತ್ತಿದ್ದಾರೆ.

ನಟ ದರ್ಶನ್ ಸೇರಿ 13 ಜನ ಆರೋಪಿಗಳ ಮೊಬೈಲ್ ಸೀಜ್ :

ನಟ ದರ್ಶನ್ ಸೇರಿ 13 ಜನ ಆರೋಪಿಗಳ ಮೊಬೈಲ್ ಸೀಜ್ ಮಾಡಿದ್ದಾರೆ. ಪೊಲೀಸರು ಪವಿತ್ರಾ ಗೌಡ ದರ್ಶನ್ ಸೇರಿ 13 ಮಂದಿಯ ಫಿಂಗರ್ ಪ್ರಿಂಟ್ ಹಾಗೂ ಫುಟ್ ಪ್ರಿಂಟ್( ಪಾದದ ಹೆಜ್ಜೆ ಗುರುತು)ನ್ನು ಪಡೆದಿದ್ದು, ಘಟನಾ ಸ್ಥಳದಲ್ಲಿ ದೊರೆತಿರೋ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್​​ಗಳನ್ನು ಪೊಲೀಸರು ಮ್ಯಾಚ್ ಮಾಡಲಿದ್ದಾರೆ. ಘಟನಾ ಸ್ಥಳದಲ್ಲಿನ ಫುಟ್ ಫ್ರಿಂಟ್ ಹಾಗೂ ಫ್ರಿಂಗರ್ ಫ್ರಿಂಟ್ ಹಾಗೂ ಆರೋಪಿಗಳ ಫುಟ್ & ಫ್ರಿಂಗರ್ ಫ್ರಿಂಟ್ ಎಫ್.ಎಸ್.ಎಲ್ ವರದಿಗೆ ಕಳಿಸಲು ತಯಾರಿ ನಡೆಸುತ್ತಿದ್ದಾರೆ.

ಪೊಲೀಸ್ ಕಸ್ಟಡಿ ಮುಗಿಯೋ ವೇಳೆಗೆ ಎಫ್.ಎಸ್.ಎಲ್ ವರದಿ ಪೊಲೀಸರ ಕೈ ಸೇರೋ ಸಾಧ್ಯತೆಯಿದ್ದು, ಫುಟ್ & ಫ್ರಿಂಗರ್ ಫ್ರಿಂಟ್ ಮ್ಯಾಚ್ ಆದ್ರೆ ಆರು ದಿನಗಳ ನಂತರ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯೋ ಸಾಧ್ಯತೆ ಹೆಚ್ಚಿದೆ. ಸದ್ಯ ಜೂನ್ 9ರ ಸಿಡಿಆರ್ ಹಾಗೂ ಟವರ್ ಡಂಪ್ ಆಧಾರದಲ್ಲಿ ದರ್ಶನ್ ಪವಿತ್ರಾಗೌಡರನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಇನ್​ಸ್ಟಾದಲ್ಲಿ ಪ್ರೊಫೈಲ್ ​ಪಿಕ್ಚರ್​ ಡಿಲೀಟ್ ಮಾಡಿ, ದರ್ಶನ್​ನ​ ಅನ್​ಫಾಲೋ ಮಾಡಿದ ಪತ್ನಿ ವಿಜಯಲಕ್ಷ್ಮಿ..!

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here