Download Our App

Follow us

Home » ರಾಜಕೀಯ » ಹೆಚ್​ಡಿಕೆ, ಜೆಡಿಎಸ್ ಮುಗಿಸಿ ಕಾಂಗ್ರೆಸ್ ನಾಯಕರಿಗೆ ಅನುಭವವಿದೆ – ಪ್ರಹ್ಲಾದ್ ಜೋಶಿ..!

ಹೆಚ್​ಡಿಕೆ, ಜೆಡಿಎಸ್ ಮುಗಿಸಿ ಕಾಂಗ್ರೆಸ್ ನಾಯಕರಿಗೆ ಅನುಭವವಿದೆ – ಪ್ರಹ್ಲಾದ್ ಜೋಶಿ..!

ಹುಬ್ಬಳ್ಳಿ : ಕುಮಾರಸ್ವಾಮಿಯನ್ನು ನಾವು ಮುಗಿಸೋದಿಲ್ಲ. ಹೆಚ್​ಡಿಕೆಯನ್ನು ಮುಗಿಸಿದ್ದು ಕಾಂಗ್ರೆಸ್​ ನಾಯಕರೇ ಅಲ್ಲವೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳಿಯಲ್ಲಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷವನ್ನು ಮುಗಿಸಲು ಬಿಜೆಪಿಯೇ ಷಡ್ಯಂತ್ರ ಮಾಡಿದೆ ಎಂಬ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರಹ್ಲಾದ್ ಜೋಶಿ ಅವರು, HDK ಎನ್​ಡಿಎ ಕೂಟದ ಒಂದು ಭಾಗವಾಗಿದ್ದಾರೆ. NDAದಲ್ಲಿ ಇರುವ ಯಾರನ್ನೂ ಬಿಜೆಪಿ ಮುಗಿಸುವ ಅಥವಾ ಕೈ ಬಿಡುವ ಮಾತೇ ಇಲ್ಲ ಎಂದು ಹೇಳಿದರು.

ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಕೆಳಗಿಳಿದ್ಯಾರು? ಕಾಂಗ್ರೆಸ್ ತನ್ನ ಅನುಭವದ ಮಾತುಗಳನ್ನು ಹೇಳುತ್ತಿದೆ. ಕಾಂಗ್ರೆಸ್​ ಶಾಸಕರ ರಾಜೀನಾಮೆ ಕೊಡಿಸಿದ್ದು ಯಾರು? ಹಗರಣ ಆಗಿದ್ದರೆ ತನಿಖೆ ಮಾಡಿ ಎಂದು ಕುಮಾರಸ್ವಾಮಿಯವರೇ ಹೇಳಿದ್ದಾರೆ. ನಿಮ್ಮದೇ ಸರ್ಕಾರವಿದೆ. ತನಿಖೆ ನಡೆಸಿ ಎಂದು ಜೋಶಿ ಸವಾಲು ಎಸೆದಿದ್ದಾರೆ.

ಇನ್ನು ರಾಷ್ಟ್ರಪತಿಗಳ ಮುಂದೆ ಕಾಂಗ್ರೆಸ್ ಶಾಸಕರ ಪರೇಡ್ ವಿಚಾರಕ್ಕೆ ಖಾರವಾಗಿ ರಿಯಾಕ್ಟ್ ಮಾಡಿದ ಅವರು, ಸಿದ್ದರಾಮಯ್ಯನವರೇ ಜನರೇ ನಿಮ್ಮನ್ನು ಪರೇಡ್​ ಮಾಡಿಸ್ತಾರೆ. ನೀವು ಪರೇಡ್ ಮಾಡೋ ಅಗತ್ಯ ಏನೂ ಇಲ್ಲ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : FSL ರಿಪೋರ್ಟ್ ಬಂದ ಕೂಡಲೇ ಚಾರ್ಜ್​ ಶೀಟ್ ಸಲ್ಲಿಕೆ ಮಾಡುತ್ತೇವೆ – ​ಬಿ.ದಯಾನಂದ್ ಮಾಹಿತಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here