ಬೆಂಗಳೂರು : ಇಡೀ ದೇಶಕ್ಕೆ ದೇಶವೇ ಬರ ಹಾಗೂ ಬಿಸಿಲಿನ ತಾಪದಿಂದ ತತ್ತರಿಸುತ್ತಿದೆ. ಇದಕ್ಕೆ ಪರಿಸರ ನಾಶವೂ ಒಂದು ಕಾರಣ ಎನ್ನಲಾಗುತ್ತಿದೆ, ಪರಿಸ್ಥಿತಿ ಹೀಗಿರುವಾಗಲೇ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜ್ನಿಂದ ಮುಗಿಲೆತ್ತರಕ್ಕೆ ಬೆಳೆದಿದ್ದ ಹತ್ತಾರು ಮರಗಳ ಮಾರಣಹೋಮ ನಡೆದಿದೆ.
ಮುಗಿಲೆತ್ತರಕ್ಕೆ ಬೆಳೆದಿದ್ದ ಮರಗಳಿಂದ ವಿದ್ಯಾರ್ಥಿಗಳಿಗೆ ಅಡ್ಡಾಡಲು ಸಮಸ್ಯೆ ಆಗುತ್ತಿದೆ. ಅಷ್ಟೇ ಅಲ್ಲದೆ ಕಾಲೇಜು ಕಟ್ಟಡ ಸಾರ್ವಜನಿಕವಾಗಿ ಕಾಣುತ್ತಿಲ್ಲ ಎಂಬ ನಿಟ್ಟಿನಲ್ಲಿ ಕನಕಪುರ ರಸ್ತೆಯ ಆರ್ಟ್ ಆಫ್ ಲೀವಿಂಗ್ ಬಳಿರುವ ಹತ್ತಾರು ಮರಗಳನ್ನು ಕಾಲೇಜಿನ ಸಿಬ್ಬಂದಿ ಕಡಿದಿದ್ದಾರೆ.
ಕಾಲೇಜ್ನ ಪರಿಸರವಿರೋಧಿ ಧೋರಣೆಗೆ ಬಿದಿರು ಮರವೂ ಬಲಿಯಾಗಿದೆ. ಇನ್ನು ದಯಾನಂದ ಸಾಗರ ಕಾಲೇಜ್ ಧೋರಣೆಗೆ ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪರಿಸರವಾದಿಗಳು ಅರಣ್ಯ ಇಲಾಖೆಗೆ ದೂರು ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ : ‘ಆಪರೇಷನ್ ಡಿ’ ಚಿತ್ರದ ಟೀಸರ್ ರಿಲೀಸ್ – ಚಿತ್ರತಂಡಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್..!
Post Views: 49