ಬೆಂಗಳೂರು : ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಸಂಬಂಧ SIT ತನಿಖಾ ತಂಡಕ್ಕೆ ಮುಖ್ಯಸ್ಥ ಬಿ.ಕೆ.ಸಿಂಗ್ ವಾರ್ನಿಂಗ್ ಕೊಟ್ಟಿದ್ದಾರೆ. ತನಿಖೆಯ ಯಾವುದೇ ಮಾಹಿತಿ ಸೋರಿಕೆ ಆಗಬಾರದು, ಅತ್ಯಂತ ಕರಾರುವಕ್ಕಾಗಿ ತನಿಖೆಯನ್ನು ಮಾಡಬೇಕು. ಇದೊಂದು ಸೂಕ್ಷ್ಮ ಮತ್ತು ಪ್ರತಿಷ್ಠಿತ ಪ್ರಕರಣ, ವಿಚಾರಣೆಗೆ ಮುನ್ನ, ವಿಚಾರಣೆ ನಂತರ ಮಾಹಿತಿ ಸೋರಿಕೆ ಆಗ್ತಿತ್ತು. SIT ವಿಚಾರಣೆಗೂ ಮುನ್ನ ಅಜ್ಞಾತ ಸ್ಥಳದಿಂದ ಕಾರ್ತಿಕ್ ವಿಡಿಯೋ ಬಿಟ್ಟಿದ್ದ, SIT ವಿಚಾರಣೆ ನಂತರ ದೇವರಾಜೇಗೌಡ ರಾಜಕಾರಣಿಗಳ ಆಡಿಯೋ ಬಿಟ್ಟಿದ್ದ ಎಂದು ಹೇಳಿದ್ದಾರೆ.
SIT ಪೊಲೀಸ್ ವಶದಲ್ಲಿದ್ದಾಗಲೇ ರೇವಣ್ಣ ಮಾಧ್ಯಮಗಳಿಗೆ ರಾಜಕೀಯ ಷಡ್ಯಂತ್ರ ಎಂದಿದ್ದ. ಹಾಗಾಗಿ ಮಾಧ್ಯಮಗಳಿಗೆ ಯಾವುದೇ ಕಾರಣಕ್ಕೂ ತನಿಖಾ ಮಾಹಿತಿ ಸೋರಿಕೆ ಆಗಬಾರದು, ಒಂದು ವೇಳೆ ತನಿಖಾ ಮಾಹಿತಿ ಸೋರಿಕೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿ.ಕೆ.ಸಿಂಗ್ ಎಚ್ಚರಿಕೆ ಕೊಟ್ಟಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಆರು ಪ್ರತ್ಯೇಕ ತಂಡ ರಚಿಸಿದೆ, ಒಂದು ತಂಡದ ತನಿಖೆ ಬಗ್ಗೆ ಮತ್ತೊಂದು ತಂಡ ಚರ್ಚಿಸುವಂತಿಲ್ಲ. ಏನೇ ಮಾಹಿತಿ ಇದ್ದರೂ ತನಿಖಾ ಮುಖ್ಯಸ್ಥರ ಗಮನಕ್ಕೆ ತರಬೇಕು, SIT ಮುಖ್ಯಸ್ಥರ ಬಳಿ ಮಾತ್ರ ಚರ್ಚೆ ಮಾಡಬೇಕು, ಕೋರ್ಟ್ ಪ್ರೊಸಿಡಿಂಗ್ಸ್, ಆರೋಪಿ ಪತ್ತೆ ಕಾರ್ಯ, ಹೇಳಿಕೆ ದಾಖಲಾಗಿದೆ. ಟೆಕ್ನಿಕಲ್/ ಡಿಜಿಟಲ್ ಎವಿಡೆನ್ಸ್, ಮಹಜರ್ ಸೇರಿ ಎಲ್ಲವೂ ಪ್ರತ್ಯೇಕ ತನಿಖೆಯಾಗುತ್ತೆ, ಯಾವುದೇ ಪ್ರಕ್ರಿಯೆಯ ಮಾಹಿತಿ ಸೋರಿಕೆ ಆಗದಂತೆ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಲೋಕಸಭೆ ಎಲೆಕ್ಷನ್ : ಇಂದು ಬೆಂಗಳೂರಿನಲ್ಲಿ ಬಿಜೆಪಿ ಅವಲೋಕನಾ ಸಭೆ..!