Download Our App

Follow us

Home » ಮೆಟ್ರೋ » ಬೆಂಗಳೂರು : ಬೆತ್ತಲೆ ಕ್ರೌರ್ಯ ಮೆರೆದಿದ್ದ ರೌಡಿಶೀಟರ್​ ​​ಕಾಲಿಗೆ ಪೊಲೀಸರ ಫೈರಿಂಗ್​..!

ಬೆಂಗಳೂರು : ಬೆತ್ತಲೆ ಕ್ರೌರ್ಯ ಮೆರೆದಿದ್ದ ರೌಡಿಶೀಟರ್​ ​​ಕಾಲಿಗೆ ಪೊಲೀಸರ ಫೈರಿಂಗ್​..!

ಬೆಂಗಳೂರು : ಬೆತ್ತಲೆ ಕ್ರೌರ್ಯ ಮೆರೆದಿದ್ದ ರೌಡಿಶೀಟರ್​ ಪವನ್‌ ಅಲಿಯಾಸ್‌ ಕಡುಬು​​ ಕಾಲಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.​ ರೌಡಿಶೀಟರ್​ ಪವನ್, ಕಳೆದ 10-12 ದಿನಗಳ ಹಿಂದೆ ಯುವಕನೋರ್ವನ ​ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿ ನಡು ರಸ್ತೆಯಲ್ಲಿ ಓಡಿಸಿದ್ದ. ಬಳಿಕ ಹವಾ ಮೇಂಟೇನ್​​ಗೆ ವಿಡಿಯೋ ಮಾಡಿ ವೈರಲ್​​​ ಮಾಡಿದ್ದ. ವಿಡಿಯೋ ಎಲ್ಲೆಡೆ ವೈರಲ್​ ಆಗ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ಪೊಲೀಸರು ಕೂಡಲೇ ಪವನ್​ ಹೆಡೆಮುರಿ ಕಟ್ಟಲು ತನಿಖೆ ಪ್ರಾರಂಭಿಸಿದ್ದರು. ತುಮಕೂರಿನಲ್ಲಿ ಪವನ್ ಅಲಿಯಾಸ್ ಕಡಬು ಅಡಗಿದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹಿರಿಯ ಅಧಿಕಾರಿಗಳು ಪವನ್​​​​​ ಅರೆಸ್ಟ್​ಗೆ ತಂಡ ರಚನೆ ಮಾಡಿ ಅಲ್ಲಿಗೆ ತೆರಳಿ ಪವನ್​ನನ್ನು ಬಂಧಿಸಿ ಕರೆತರುವಾಗ ಆತ ಪೊಲೀಸರಿಗೆ ಹಲ್ಲೆ ನಡೆಸಿ ಎಸ್ಕೇಪ್​ಗೆ ಯತ್ನಿಸಿದ್ದಾನೆ.

ರೌಡಿ ಪವನ್​ ಕಾನ್ಸ್​ಟೇಬಲ್​​ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್​​ ಯತ್ನ ಮಾಡಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿ ಕಾಲಿಗೆ ಗೋವಿಂದರಾಜನಗರ ಇನ್ಸ್​ಪೆಕ್ಟರ್​​ ಸುಬ್ರಹ್ಮಣಿ ಅವರು ಫೈರಿಂಗ್​​​ ಮಾಡಿದ್ದಾರೆ. ರೌಡಿ ಪವನ್​​​​ ವಾರೆಂಟ್ ಇದ್ರೂ ತಲೆಮರೆಸಿಕೊಂಡು ಓಡಾಡುತ್ತಿದ್ದ. ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗೋವಿಂದರಾಜನಗರ ಇನ್ಸ್​ಪೆಕ್ಟರ್​​ ಸುಬ್ರಹ್ಮಣಿ
ಇನ್ಸ್​ಪೆಕ್ಟರ್​​ ಸುಬ್ರಹ್ಮಣಿ

ಇದನ್ನೂ ಓದಿ : 10 ವರ್ಷಗಳ ಬಳಿಕ ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ಕ್ಯಾಬಿನೆಟ್ ಮೀಟಿಂಗ್​​..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here