Download Our App

Follow us

Home » ರಾಜಕೀಯ » ನೇಹಾ ಪ್ರಕರಣವನ್ನು ರಾಜಕಾರಣಕ್ಕೆ ಎಳೆಯೋ ಬಿಜೆಪಿಗೆ ನಾಚಿಕೆ ಆಗ್ಬೇಕು : ಬಿಜೆಪಿ ವಿರುದ್ಧ ಸಚಿವ ಸಂತೋಷ್​ ಲಾಡ್​ ವಾಗ್ದಾಳಿ..!

ನೇಹಾ ಪ್ರಕರಣವನ್ನು ರಾಜಕಾರಣಕ್ಕೆ ಎಳೆಯೋ ಬಿಜೆಪಿಗೆ ನಾಚಿಕೆ ಆಗ್ಬೇಕು : ಬಿಜೆಪಿ ವಿರುದ್ಧ ಸಚಿವ ಸಂತೋಷ್​ ಲಾಡ್​ ವಾಗ್ದಾಳಿ..!

ವಿಜಯಪುರ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣ ಸಂಬಂಧ ಒಂದೆಡೆ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ  ಈ ಪ್ರಕರಣ ಕೈ- ಕಮಲದ ರಾಜಕೀಯ ಕಿತ್ತಾಟಕ್ಕೆ ದಾಳವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಹೆಣ್ಣು ಮಕ್ಕಳು ಟಾರ್ಗೆಟ್​ ಎಂದು  ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ವಿಜಯಪುದಲ್ಲಿ ಗುಜರಾತ್​ ಉದಾಹರಣೆ ಕೊಟ್ಟು ಬಿಜೆಪಿ ವಿರುದ್ದ ಸಚಿವ ಸಂತೋಷ್​ ಲಾಡ್​ ವಾಗ್ದಾಳಿ ನಡೆಸಿ, ಗುಜರಾತ್​​ನಲ್ಲಿ 13 ಲಕ್ಷ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ದಿನಕ್ಕೆ 6 ಹೆಣ್ಣು ಮಕ್ಕಳ ಮೇಲೆ ಗುಜರಾತ್​ನಲ್ಲಿ ರೇಪ್​ ಆಗುತ್ತೆ.

ಯತ್ನಾಳ್​​ರಂತಹ ಬಿಜೆಪಿ ನಾಯಕರು ಅಲ್ಲಿಗೆ ಹೋಗಿ ನ್ಯಾಯ ಕೇಳ್ತಾರಾ..? ನೇಹಾ ಪ್ರಕರಣವನ್ನು ರಾಜಕಾರಣಕ್ಕೆ ಎಳೆಯೋ ಬಿಜೆಪಿಗೆ ನಾಚಿಕೆ ಆಗ್ಬೇಕು ಎಂದು ವಿಜಯಪುರದಲ್ಲಿ ಬಿಜೆಪಿ ವಿರುದ್ಧ  ಸಂತೋಷ್​ ಲಾಡ್ ಗುಡುಗಿದ್ದಾರೆ.

ಇದನ್ನೂ ಓದಿ : ಚೊಂಬು ಹಿಡಿದು ಬಂದ ಕಾಂಗ್ರೆಸ್​ಗೆ ರಾಜಾಹುಲಿ ತಿರುಗೇಟು : ‘ಕೈ’ ಪಡೆಗೆ ಬಿ.ಎಸ್ ವೈ ಖಡಕ್ ವಾರ್ನಿಂಗ್..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here