ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ದೇವರಾಜೇಗೌಡರನ್ನು ಹೊಳೆನರಸೀಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. PSI ಕಾಳೆಗೌಡ, PSI ಸಲ್ಮಾನ್ ಖಾನ್ ಟೀಂ ದೇವರಾಜೇಗೌಡರನ್ನ ಹಿರಿಯೂರಿನಿಂದ ಬಂಧಿಸಿ ಕರೆದೊಯ್ದಿದ್ದಾರೆ.
ಹಿರಿಯೂರು ಪೊಲೀಸರು ಟೋಲ್ ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 1 ರಂದು ದೇವರಾಜೇಗೌಡ ವಿರುದ್ಧ ದೂರು ದಾಖಲಾಗಿತ್ತು. ಲೈಂಗಿಕ ದೌರ್ಜನ್ಯ ಆರೋಪದಡಿ FIR ಕೂಡ ದಾಖಲಾಗಿತ್ತು. ಆದರೆ ದೇವರಾಜೇಗೌಡ ಸಂತ್ರಸ್ತೆ ವಿರುದ್ಧ ಹೆಬ್ಬಾಳದಲ್ಲಿ ದೂರು ದಾಖಲಿಸಿದ್ದರು. ನಿನ್ನೆ ದೇವರಾಜೇಗೌಡರನ್ನು ಬಂಧಿಸಿ ರಾತ್ರಿಯಿಡೀ ಹೊಳೆ ನರಸೀಪುರ ಪೊಲೀಸರು ಡ್ರಿಲ್ ಮಾಡಿದ್ದಾರೆ. ಕೋರ್ಟ್ ಮುಂದೆ ಹಾಜರು ಪಡಿಸಿ ಪೊಲೀಸರು ವಶಕ್ಕೆ ಕೇಳಲಿದ್ದಾರೆ.
ಮತ್ತೊಂದು ಆಡಿಯೋ ರಿಲೀಸ್ : ಪ್ರಜ್ವಲ್ ಪೆನ್ಡ್ರೈವ್ ಪ್ರರಣದ ಮತ್ತೊಂದು ಸ್ಫೋಟಕ ಆಡಿಯೋವನ್ನ ದೇವರಾಜೇಗೌಡ ರಿಲೀಸ್ ಮಾಡಿದ್ದಾರೆ. L.R ಶಿವರಾಮೇಗೌಡ ಮಾತ್ನಾಡಿರೋ ಆಡಿಯೋ ಎಂದು ರಿಲೀಸ್ ಮಾಡಿದ್ದು, SIT ಮುಂದೆ ಡಿ.ಕೆ ಶಿವಕುಮಾರ್ ಬಗ್ಗೆ ಚಕಾರ ಎತ್ತಂಗಿಲ್ಲ ಎಂದು L.R ಶಿವರಾಮೇಗೌಡ ತಾಕೀತು ಮಾಡಿರುವ ಆಡಿಯೋ ಎನ್ನಲಾಗಿದೆ.
SIT ನೋಟಿಸ್ ಕೊಟ್ರೆ ಡಿಕೆ ಬಗ್ಗೆ ಚಕಾರ ಎತ್ತಬೇಡ, ನಾನು ಹಿಂದಿನಿಂದ ಹೋರಾಟ ಮಾಡ್ತಿಲ್ಲ. ಈ ಕೃತ್ಯ ಕಡಿಮೆಯಾಗ್ಬೇಕು ನಮ್ಮ ತಾಲೂಕು ಕ್ಲೀನ್ ಆಗಬೇಕು, ನಾನು ಅವ್ರ ವಿರುದ್ಧ ಕೋರ್ಟ್ನಲ್ಲೂ ಹೋರಾಟ ಮಾಡಿದ್ದೀನಿ ಎಂದು ದೇವರಾಜೇಗೌಡ, ಶಿವರಾಮೇಗೌಡ ಮಾತ್ನಾಡಿದ್ರು ಎನ್ನಲಾದ ಆಡಿಯೋ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ : ಕೊಡಗು : SSLC ವಿದ್ಯಾರ್ಥಿನಿ ಹ*ತ್ಯೆ ಆರೋಪಿ ಪ್ರಕಾಶ್ ಆತ್ಮಹ*ತ್ಯೆ..!