Download Our App

Follow us

Home » Uncategorized » ಬಿಗ್ ಬಾಸ್ ಮನೆಯಲ್ಲಿ ಹೊಡೆದಾಟ – ಕೆನ್ನೆಗೆ ಬಾರಿಸಿದ ಸ್ಪರ್ಧಿ ಎಲಿಮಿನೇಟ್..!

ಬಿಗ್ ಬಾಸ್ ಮನೆಯಲ್ಲಿ ಹೊಡೆದಾಟ – ಕೆನ್ನೆಗೆ ಬಾರಿಸಿದ ಸ್ಪರ್ಧಿ ಎಲಿಮಿನೇಟ್..!

ಹಿಂದಿ ಬಿಗ್ ಬಾಸ್ ಸೀಸನ್ 17 ಒಂದಲ್ಲಾ ಒಂದು ಗಲಾಟೆಗೆ ಸುದ್ದಿಯಾಗುತ್ತಲೇ ಇದೆ. ಬಿಗ್​ಬಾಸ್​ನಲ್ಲಿ ಯಾವುದೇ ಕಾರಣಕ್ಕೂ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವಂತಿಲ್ಲ ಅನ್ನೊ ನಿಯಮವಿದೆ. ಹಾಗೆ ಮಾಡಿದರೆ ತಕ್ಷಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆ.

ಈ ನಿಯಮದ ಬಗ್ಗೆ ಗೊತ್ತಿದ್ದರೂ, ಬಿಗ್​ಬಾಸ್ ಹಿಂದಿ ಸೀಸನ್ 17ರಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಬಿಗ್​ಬಾಸ್​​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಅಭಿಷೇಕ್ ಕುಮಾರ್ ಸಮರ್ಥ್ ಜ್ಯುರೆಲ್​​ ಕಪಾಳಕ್ಕೆ ಬಾರಿಸಿದ್ದಾರಂತೆ.

ಹೀಗಾಗಿ ಮನೆಯ ಕ್ಯಾಪ್ಟನ್ ಅಂಕಿತಾ ಅವರು ಅಭಿಷೇಕ್​ನ ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಹೌದು.. ಈ ಗಲಾಟೆಗೆ ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಅಂಕಿತಾಗೆ ಬಿಗ್​ಬಾಸ್​ ಆದೇಶವೊಂದನ್ನು ನೀಡುತ್ತಾರೆ.

ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರ ಮಾಡಿ ಹೇಳಿ ಎನ್ನುತ್ತಾರೆ. ಅದಕ್ಕೆ ಅಂಕಿತಾ ಅವರು ಅಭಿಷೇಕ್​ನ ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡರು.

ಅಭಿಷೇಕ್ ಕುಮಾರ್ ಹಾಗೂ ಸಮರ್ಥ್ ಜ್ಯುರೆಲ್ ಮಧ್ಯೆ ಟಾಸ್ಕ್​​ ವಿಚಾರಕ್ಕೆ ಗಲಾಟೆ ನಡೆದಿದೆ. ಇದೇ ವೇಳೆ ಆ ಗಲಾಟೆ ಜೋರಾಗಿ ಅಭಿಷೇಕ್ ಅವರು ಸಮರ್ಥ್​​ ಕೆನ್ನೆಗೆ ಹೊಡೆದಿದ್ದಾರೆ. ಕೂಡಲೇ ಅಲ್ಲೇ ಕುಳಿತುಕೊಂಡಿದ್ದ ಸ್ಪರ್ಧಿಗಳು ಅವರನ್ನು ತಡೆದಿದ್ದಾರೆ. ಅಭಿಷೇಕ್ ಕುಮಾರ್ ಸಮರ್ಥ್ ಜ್ಯುರೆಲ್ ಹೊಡೆದಿರೋ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ : ಉಡುಪಿಯ ಗಣೇಶ್ ಪ್ರಸಾದ್ ಶೆಟ್ಟಿಗೆ ದಾದಾ ಲೇಖಕ್ ರಾಜ್ ಪ್ರಶಸ್ತಿ..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here