ಬೆಂಗಳೂರು : ಮತದಾನಕ್ಕೆ 10 ದಿನ ಬಾಕಿ ಇರುವಾಗಲೇ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಕೊಪ್ಪಳದ ಸಂಸದ ಕರಡಿ ಸಂಗಣ್ಣ BJPಗೆ ಗುಡ್ಬೈ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಕರಡಿ ಸಂಗಣ್ಣ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕೊಪ್ಪಳ ಟಿಕೆಟ್ ಸಿಗದೇ ಬಿಜೆಪಿ ಮೇಲೆ ಕಿಡಿಕಾರಿದ್ದ ಕರಡಿ ಸಂಗಣ್ಣ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಕರಡಿ ಸಂಗಣ್ಣ ಬಿಎಸ್ವೈ, ರಾಧಾಮೋಹನ್ ದಾಸ್ ಮನವೊಲಿಕೆಗೆ ಜಗ್ಗದೆ, ನಿನ್ನೆ ಲೋಕಸಭಾ ಸದಸ್ಯತ್ವ ಮತ್ತು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ.
ಕೊಪ್ಪಳ ಭಾಗದಲ್ಲಿ ಕರಡಿ ಸಂಗಣ್ಣ ಪ್ರಭಾವಿಯಾಗಿದ್ದು, ತಮ್ಮ ಅಪಾರ ಬೆಂಬಲಿಗರ ಜತೆ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ನಾಯಕರು MLC ಸ್ಥಾನದ ಆಫರ್ ನೀಡಿದ್ದು, ಸ್ಥಾನಮಾನ ಪಕ್ಕಾ ಆಗ್ತಿದ್ದಂತೆ ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿದ್ದಾರೆ.
ಇದನ್ನೂ ಓದಿ : ಕನ್ನಡದ ಪ್ರಚಂಡ ಕುಳ್ಳ ನಟ ದ್ವಾರಕೀಶ್ ಪಂಚಭೂತಗಳಲ್ಲಿ ಲೀನ..!