ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್ನಲ್ಲಿ ದಿನ ನಿತ್ಯ ಸಾವಿರಾರು ಜನರು ಒಡಾಡ್ತಾರೆ. ಕಾಲಿಡಲು ಜಾಗವಿಲ್ಲದಷ್ಟು ಬ್ಯುಸಿ ಏರಿಯಾದಲ್ಲಿ ನಿನ್ನೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ ಭಾರೀ ದುರಂತ ಒಂದು ನಡಿಯುತ್ತಿತ್ತು.
ನೂರಾರು ಕಮರ್ಷಲ್ ಕಾಂಪ್ಲೆಕ್ಸ್.. ಸಾವಿರಾರು ಜನರ ಓಡಾಟದ ಮಧ್ಯದಲ್ಲಿ ನಿನ್ನೆ ಸಂಜೆ ಮೆಜೆಸ್ಟಿಕ್ನಲ್ಲಿ ಖಾಸಗಿ ಬಸ್ಗೆ ಬೆಂಕಿ ಬಿದ್ದಿದೆ. ಬೆಂಕಿ ತಗುಲಿದ ಕೆಲ ನಿಮಿಷಗಳಲ್ಲಿಯೇ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಆದರೆ ಮೆಜೆಸ್ಟಿಕ್ನಲ್ಲಿ ಖಾಸಗಿ ಬಸ್ಗೆ ಬೆಂಕಿ ಬಿದ್ದಿರೋ ಹಿಂದಿದೆ ಮಹಾ ಭ್ರಷ್ಟಾಚಾರ. ಜನರ ಪ್ರಾಣವನ್ನೇ ಒತ್ತೆಯಿಟ್ಟು ಪೊಲೀಸರು ಲಂಚ ವಸೂಲಿ ಮಾಡುತ್ತಿರುವ ಸತ್ಯ ಬಟಾ ಬಯಲಾಗಿದೆ.
ನೋ ಪಾರ್ಕಿಂಗ್ ಬೋರ್ಡ್ ಇರೋ ಕಡೆ ಬೈಕ್ ಪಾರ್ಕ್ ಮಾಡಿದ್ರೆ ಪೊಲೀಸರು ಕೇಸ್ ಹಾಕೋದು ಎಲ್ಲರಿಗೂ ತಿಳಿದೆಯಿದೆ. ಆದರೆ ಮೆಜೆಸ್ಟಿಕ್ ಏರಿಯಾದಲ್ಲಿ ಮಾತ್ರ ಖಾಸಗಿ ಬಸ್ ಪಾರ್ಕ್ ಮಾಡಿದ್ರೆ ಪೊಲೀಸರು ಕೇಳೋದೆ ಇಲ್ಲ. ಆನಂದ್ ರಾವ್ ಸರ್ಕಲ್, ರೈಲ್ವೇ ಪ್ಯಾರಲಲ್ ರೋಡ್ನಲ್ಲಿ ಖಾಸಗಿ ಬಸ್ಗಳದ್ದೇ ದರ್ಬಾರ್. ಅಷ್ಟೇ ಅಲ್ಲದೇ ನೋ ಪಾರ್ಕಿಂಗ್ ಸ್ಥಳದಲ್ಲಿ ಬಸ್ ಪಾರ್ಕ್ ಮಾಡಿ ರಿಪೇರಿ ಮಾಡ್ತಿರೋ ಬಸ್ಗಳಿಂದ ಡಿಸೇಲ್ ಲೀಕ್ ಆಗುತ್ತಿದ್ದು, ನಿನ್ನೆ ಬಸ್ಗೆ ಬೆಂಕಿ ತಗುಲಲು ಡಿಸೇಲ್ ಲೀಕ್ ಆಗೋದೇ ಕಾರಣ ಎಂದು ಹೇಳಲಾಗುತ್ತಿದೆ.
ರಸ್ತೆ ಬದಿಯಲ್ಲೇ ಖಾಸಗಿ ಬಸ್ ರಿಪೇರಿ ಮಾಡುವುದರಿಂದ ರಸ್ತೆಯಲ್ಲಿ ಆಯಿಲ್ಗಳು ಹರಿದಾಡುತ್ತದೆ. ಆಯಿಲ್ ಬಿದ್ದ ರಸ್ತೆಯಲ್ಲಿ ನೂರಾರು ಬೈಕ್ ಸವಾರರು ಸ್ಕಿಡ್ ಆಗಿ ಸಾವು-ನೋವು ಸಂಭವಿಸಿದೆ. ಆದರೆ ಖಾಸಗಿ ಬಸ್ಗಳಿಂದ ಡಿಸೇಲ್ ಲೀಕ್ ಆಗೋದು ಗೊತ್ತಿದ್ರು ಪೊಲೀಸರು ಕೇಸ್ ಮುಚ್ಚಿ ಹಾಕಲು ಪ್ರಮುಖ ಕಾರಣ ಬಸ್ ಮಾಲೀಕರ ಜೊತೆ ಪೊಲೀಸ್ ಅಡ್ಜಸ್ಟ್ಮೆಂಟ್.
ಹೌದು, ಡಿಸೇಲ್ ಲೀಕ್ ಅಡ್ಜಸ್ಟ್ಮೆಂಟ್ನ ಎಕ್ಸ್ಕ್ಲೂಸಿವ್ ಆಡಿಯೋ ಇದೀಗ ಬಿಟಿವಿಗೆ ಲಭ್ಯವಾಗಿದೆ. ಹಲವು ಬಸ್ ಕಂಪನಿಗಳಿಂದ ಪೊಲೀಸರು ಮಂತ್ಲಿ ಕೋಟಿ ಕೋಟಿ ಲಂಚ ಪಡೆಯುತ್ತಿದ್ದಾರೆ. ಕಾಸು ಕೊಟ್ರೆ ಪೊಲೀಸರೇ ಆಯಿಲ್ ಬಿದ್ದ ರಸ್ತೆಗೆ ಮಣ್ಣು ತಂದು ಹಾಕ್ತಾರೆ. ಲಂಚಕ್ಕಾಗಿ ಬಸ್ ಮಾಲೀಕನನ್ನು ಪೊಲೀಸರು ಪುಸಲಾಯಿಸುತ್ತಿರುವ ಆಡಿಯೋ ಲಭ್ಯವಾಗಿದ್ದು, ಲಂಚ ತೆಗೆದುಕೊಳ್ಳೊ ಪೊಲೀಸರು ಯಾರು..? ಕೋಟಿ ಕೋಟಿ ಕೊಟ್ಟಿದ್ಯಾರು..? ಖಾಸಗಿ ಬಸ್ಗೆ ಮೆಜೆಸ್ಟಿಕ್ನಲ್ಲಿ ಪಾರ್ಕ್ ಮಾಡೋಕೆ ಅವಕಾಶ ಕೊಟ್ಟವರಾರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬಿಟಿವಿಯಿಂದ ಇಂದು ಕಾರ್ಯಾಚರಣೆ ನಡೆಯಲಿದೆ.
ಇದನ್ನೂ ಓದಿ : ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!