ಚಿತ್ರದುರ್ಗ : ಕೋಟೆನಾಡಿನ ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ಹಿನ್ನೆಲೆಯಿಂದಾಗಿ ಚಿತ್ರದುರ್ಗದಲ್ಲಿಂದು ಸರ್ಕಾರದ ನೀತಿ ಖಂಡಿಸಿ ಬಂದ್ ಘೋಷಣೆಯಾಗಿದೆ. ಭದ್ರಾ ಮೇಲ್ದಂಡೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನೇತೃತ್ವದಲ್ಲಿ ಬಂದ್ ಘೋಷಣೆಯಾಗಿದ್ದು, ಜಿಲ್ಲೆಯ ರೈತಪರ, ಕನ್ನಡ ಪರ, ಕಾರ್ಮಿಕರು ಸೇರಿ 20 ಹೆಚ್ಚು ಸಂಘಟನೆಗಳು ಸಾಥ್ ನೀಡಿದ್ದಾರೆ.
ಬೆಳಗ್ಗೆ ಚಿತ್ರದುರ್ಗದಲ್ಲಿ ಬಸ್, ಆಟೋ ಸಂಚಾರ, ಜನ ಜೀವನ ಎಂದಿನಂತೆಯಿದ್ದು, ಹೂವು, ಹಾಲು, ಹಣ್ಣು, ತರಕಾರಿ ಮಾರಾಟ ಎಂದಿನಂತೆಯಿತ್ತು. 7 ಗಂಟೆ ಬಳಿಕ ಚಿತ್ರದುರ್ಗ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಬಂದ್ ಘೋಷಣೆ ಮಾಡಿದ್ದಾರೆ.
ಆಳುವ ಸರ್ಕಾರಗಳಿಗೆ ಹೋರಾಟದ ಬಿಸಿಮುಟ್ಟಿಸಲು ರೈತರು ಬಂದ್ ಮಾಡಿದ್ದು, ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಗರದ ಗಾಂಧಿ ವೃತ್ತ ಸೇರಿಹಲವೆಡೆ ಪೋಲೀಸರು ಬಂದೋ ಬಸ್ತ್ ಕಲ್ಪಿಸಿದ್ದಾರೆ.
ಇದನ್ನೂ ಓದಿ : ಪಿಎಸ್ಐ ನೇಮಕಾತಿಗೆ ರಾಜ್ಯದಲ್ಲಿ ಇಂದು ಮರು ಪರೀಕ್ಷೆ…!