ಬೆಂಗಳೂರು : ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಕಂದಮ್ಮ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಹೆಚ್.ಎಸ್.ಆರ್.ಲೇಔಟ್ನ ಅಗರದಲ್ಲಿ ನಡೆದಿದೆ. ಅಪಘಾತ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಕಂದಮ್ಮ.
ಏಪ್ರಿಲ್ 21ರ ರಾತ್ರಿ 11 ಗಂಟೆ 26 ನಿಮಿಷಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂಬಂಧಿಗಳ ಮದುವೆ ಇದ್ದ ಕಾರಣ ಮೃತ ಶೈಹಾ ಜನ್ನತ್ ಕುಟುಂಬ ಸಮೇತವಾಗಿ ಚನ್ನಪಟ್ಟಣಕ್ಕೆ ಹೋಗಿದ್ರು.
ಕುಟುಂಬಸ್ಥರು ಮನೆಗೆ ವಾಪಾಸ್ ಆದಾಗ ರಾತ್ರಿಯಾಗಿತ್ತು. ಕಾರು ಗೇಟ್ ಬಳಿ ನಿಲ್ಲಿಸಿ ಕುಟುಂಬಸ್ಥರು ಮನೆಯೊಳಗೆ ಹೋಗಿದ್ರು. ಮಗುವಿನ ತಂದೆ ಕಾರಿನಲ್ಲಿದ್ದ ಲಗೇಜ್ ಅನ್ನ ಮನೆಯೊಳಗೆ ಇಡ್ತಿದ್ರು. ಬಳಿಕ ಎಲ್ಲೋ ಹೋಗೋದಕ್ಕೆ ಮಗುವಿನ ತಂದೆ ರೆಡಿಯಾಗಿದ್ರು.
ಈ ವೇಳೆ ಕಾರು ಸ್ಟಾರ್ಟ್ ಮಾಡೋಣ ಅನ್ನುವಷ್ಟರಲ್ಲಿ ಕಂದಮ್ಮ ಶೈಹಾ ಜನ್ನತ್ ಓಡೋಡಿ ಬಂದು ಕಾರ್ನ ಡೋರ್ ಬಳಿಯೇ ನಿಂತಿತ್ತು. ಮಗಳನ್ನ ಗಮನಿಸದೆ ಕಾರನ್ನ ಸ್ಟಾರ್ಟ್ ಮಾಡಿದ ಮಗುವಿನ ತಂದೆ ಮುಂದಕ್ಕೆ ಕಾರನ್ನು ಚಲಾಯಿಸಿದ್ದಾರೆ. ಆಗ ಕಾರಿನ ಚಕ್ರಕ್ಕೆ ಸಿಲುಕಿ ಕಂದಮ್ಮ ಸ್ಥಳದಲ್ಲೇ ಕೆನೆಯುಸಿರೆಳೆದಿದೆ. ಸದ್ಯ ಘಟನೆ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಸ್ಟಮ್ಸ್ ಅಧಿಕಾರಿಗಳ ಬೃಹತ್ ಕಾರ್ಯಾಚರಣೆ – ಜೀವಂತ ಅನಕೊಂಡ ಹಾವುಗಳ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಅರೆಸ್ಟ್..!