Download Our App

Follow us

Home » ಅಪರಾಧ » ಬೆಂಗಳೂರು : ಬೈಕ್ ಬಿಟ್ಟು ಬಂದಿದ್ದಕ್ಕೆ ಎದೆಗೆ ಚೂರಿ ಇರಿದು ಮಗನನ್ನೇ ಕೊಂದ ತಂದೆ..!

ಬೆಂಗಳೂರು : ಬೈಕ್ ಬಿಟ್ಟು ಬಂದಿದ್ದಕ್ಕೆ ಎದೆಗೆ ಚೂರಿ ಇರಿದು ಮಗನನ್ನೇ ಕೊಂದ ತಂದೆ..!

ಬೆಂಗಳೂರು : ಬೈಕ್ ಬಿಟ್ಟು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಮಗನನ್ನೇ ತಂದೆ ಸಾಯಿಸಿದ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಂಜನ್ ಕುಮಾರ್ (27) ಮೃತ ಪುತ್ರ. ವೆಂಕಟೇಶ್ (57) ಕೊಲೆ ಮಾಡಿದ ಆರೋಪಿ ತಂದೆ.

ವೆಂಕಟೇಶ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದ. ವೆಂಕಟೇಶ್​ಗೆ ಅಂಜನ್ ಹಾಗೂ ಓರ್ವ ಮಗಳಿದ್ದು, ಮಗಳಿಗೆ ದ್ವಿಚಕ್ರ ವಾಹನ ಕೊಡಿಸಿದ್ದ. ಭಾನುವಾರ ಸಂಜೆ ಬೈಕ್ ತೆಗೆದುಕೊಂಡು ಹೋಗಿದ್ದ ವೆಂಕಟೇಶ್, ಕುಡಿದ ಮತ್ತಲ್ಲಿ ಕೀ ಕಳೆದುಕೊಂಡು , ಬೈಕ್ ತರದೆ ಮನೆಗೆ ವಾಪಸ್ ಬಂದಿದ್ದ.

ನಿನ್ನೆ ಬೆಳಗ್ಗೆ ತಂದೆಗೆ ಬೈಕ್ ಎಲ್ಲಿ ಎಂದು ಮಗ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ. ಜಗಳ ಮಧ್ಯೆ ಹೆಲ್ಮೆಟ್​ನಿಂದ ತಂದೆಗೆ ಅಂಜನ್ ಹಲ್ಲೆ ಮಾಡಿದ್ದಾನೆ. ಆಗ ಕೋಪಗೊಂಡು ಅಡುಗೆ ಮನೆಯಲ್ಲಿದ್ದ ಚಾಕು ತಂದು ಮಗನಿಗೆ ಇರಿದಿದ್ದಾನೆ.

ಅಂಜನ್ ಎದೆಯ ಎಡಭಾಗಕ್ಕೆ ಚಾಕು ಹೊಕ್ಕಿದ ಪರಿಣಾಮ ಅಂಜನ್ ತೀವ್ರ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ : ತ್ರಿಬಲ್‌ ಮರ್ಡರ್ ಕೇಸ್​ ಆರೋಪಿಗೆ BIAAPA ಅಧ್ಯಕ್ಷ ಸ್ಥಾನ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ..!

 

 

 

 

 

 

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here