ಅಕ್ರಮ ಬೆಟ್ಟಿಂಗ್ ದಂಧೆಯಿಂದ ‘ಬಂಗಾರ’ದ ಮನುಷ್ಯನಾದ ಪಪ್ಪಿ.. ಕಾಂಗ್ರೆಸ್​ನಿಂದ ವಜಾ ಯಾವಾಗ? – ಬಿಜೆಪಿ ಟೀಕೆ!

ಬೆಂಗಳೂರು : ಅಕ್ರಮ, ಆನ್​ಲೈನ್ ಬೆಟ್ಟಿಂಗ್ ಆರೋಪದ ಮೇಲೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿ, ₹100 ಕೋಟಿಗೂ ಹೆಚ್ಚು ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿದೆ. ಇದೀಗ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕಾಂಗ್ರೆಸ್​ನಿಂದ ವಜಾ ಯಾವಾಗ ಎಂದು ಟೀಕಿಸಿದೆ.

<iframe src="https://www.facebook.com/plugins/post.php?href=https%3A%2F%2Fwww.facebook.com%2FBJP4Karnataka%2Fposts%2Fpfbid02mF5pLLPfH16tEqrTFRPdFUdPkUbqVSivBrrRy16JSBcFS2R17xTadUZqnjuY8rh5l&show_text=true&width=500" width="500" height="737" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share"></iframe>

ಈ ಬಗ್ಗೆ ಬಿಜೆಪಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ದಂಧೆ, ಮನಿ ಲ್ಯಾಂಡ್ರಿಂಗ್‌ ನಿಂದ ಕಾಂಗ್ರೆಸ್‌ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್‌ ಪಪ್ಪಿ ಸಂಪಾದಿಸಿದ ₹100 ಕೋಟಿಗೂ ಹೆಚ್ಚು ಅಕ್ರಮ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ದಂಧೆಯಿಂದ ಬಡವರ ಬದುಕನ್ನು ಹಾಳು ಮಾಡಿದ ಈ ಪಪ್ಪಿಯನ್ನು ಕಾಂಗ್ರೆಸ್ ಏಕೆ ಇದುವರೆಗೂ ಪಕ್ಷದಿಂದ ಉಚ್ಛಾಟಿಸಿಲ್ಲ? ಪಪ್ಪಿ ನಡೆಸುತ್ತಿದ್ದ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ದಂಧೆಯಲ್ಲಿ ಕಾಂಗ್ರೆಸ್ಸಿಗೂ ಒಂದು ಪಾಲಿತ್ತೇ? ಎಂದು ಪ್ರಶ್ನಿಸಿದೆ.

ಅಷ್ಟೇ ಅಲ್ಲದೆ ಬಿಜೆಪಿ ಹಾಸ್ಯಾಸ್ಪದ ಪೋಸ್ಟರ್​ ಹಂಚಿಕೊಂಡಿದ್ದು, ಬೆಟ್ಟಿಂಗ್​ನಿಂದ ಬಂಗಾರದ ಮನುಷ್ಯನಾದ ಪಪ್ಪಿ ಎಂದು ಕಾಲೆಳೆದಿದೆ. ಇನ್ನು ಕಾಂಗ್ರೆಸ್​ನಿಂದ ಬೆಟ್ಟಿಂಗ್ ಪಪ್ಪಿಯ ವಜಾ ಯಾವಾಗ? ಎಂದು ಕಾಂಗ್ರೆಸ್​ ನಾಯಕರಿಗೆ ಪ್ರಶ್ನೆಗಳ ಸುರಿಮಳೆ ಹರಿಸಿದೆ.

ಇದನ್ನೂ ಓದಿ : ಕಲ್ಲು ತೂರಾಟ ಕೇಸ್ ‌- ಕರ್ತವ್ಯ ಲೋಪದಡಿ ಮದ್ದೂರು ಸರ್ಕಲ್ ಇನ್ಸ್​​ಪೆಕ್ಟರ್ ಶಿವಕುಮಾರ್ ಸಸ್ಪೆಂಡ್!

Btv Kannada
Author: Btv Kannada

Read More