ಚಿತ್ರದುರ್ಗ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಮ್ಮ ಪುತ್ರ ಪೊಲೀಸರಿಗೆ ಶರಣಾಗಿರುವ ಸುದ್ದಿ ತಿಳಿದು ಆರೋಪಿ ಅನುಕುಮಾರ್ ತಂದೆ ಚಂದ್ರಣ್ಣ ರಸ್ತೆಯಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಈ ಘಟನೆ ಹೊಳಲ್ಕೆರೆ ರಸ್ತೆಯಲ್ಲಿ ನಿನ್ನೆ ಸಂಜೆ 7 ಗಂಟೆ ವೇಳೆಗೆ ನಡೆದಿದ್ದು, ಚಂದ್ರಣ್ಣ ರಸ್ತೆಯಲ್ಲಿ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಸಿದುಬೀಳುತ್ತಿದ್ದಂತೆಯೇ ಚಂದ್ರಣ್ಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲೇ ಕಡಿಮೆ ರಕ್ತದೊತ್ತಡದಿಂದಾಗಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಒಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅನುಕುಮಾರ್ ಪೊಲೀಸರ ಮುಂದೆ ಶರಣಾಗಿದ್ದರೆ ಮತ್ತೊಂದೆಡೆ ಅವರ ತಂದೆ ಚಂದ್ರಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆಟೋ ಚಾಲಕನಾಗಿದ್ದ ಅನುಕುಮಾರ್ ಕುಟುಂಬದಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದು ಅವರು ಕುಟುಂಬದ ಆಧಾರವಾಗಿದ್ದರು.
ಮಗನ ಬಂಧನ ಮತ್ತು ಪತಿ ಚಂದ್ರಣ್ಣನ ಸಾವಿನಿಂದ ಅನುಕುಮಾರ್ ಅವರ ತಾಯಿ ಜಯಮ್ಮ ತೀವ್ರ ಅಘಾತಕ್ಕೆ ಒಳಗಾಗಿ, ನಡೆದ ಘಟನೆಗಳಿಗೆ ದರ್ಶನ್ಗೆ ಶಾಪ ಹಾಕುತ್ತಿದ್ದರೆ. ತನ್ನ ಮಗ ನಿರಪರಾಧಿಯಾಗಿದ್ದು, ಆತನನ್ನು ಬಿಡುಗಡೆ ಮಾಡುವಂತೆ ಪೊಲೀಸರನ್ನು ಜಯಮ್ಮ ವಿನಂತಿಸುತ್ತಿದ್ದರು.
ಇದನ್ನೂ ಓದಿ : ಬಿಎಸ್ವೈ ರೀತಿಯಲ್ಲೇ ನನ್ನ ಮುಗಿಸೋಕೆ ಪ್ರಯತ್ನ ನಡಿತಿದೆ : ಸ್ಫೋಟಕ ಸತ್ಯ ಸಿಡಿಸಿದ ಕುಮಾರಸ್ವಾಮಿ..!