ಬೆಂಗಳೂರು : ಬಿಎಸ್ ಯಡಿಯೂರಪ್ಪ ರೀತಿಯಲ್ಲಿ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ, ನನ್ನ ಯಾವುದೋ ಹಳೇ ಕೇಸ್ನ್ನು ಹುಡುಕ್ತಿದ್ದಾರಂತೆ. ನನ್ನನ್ನು ಮುಗಿಸೋಕೆ ಭಾರೀ ಯತ್ನ ನಡೀತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರೇ ಖುದ್ದಾಗಿ ಈ ಸ್ಫೋಟಕ ಸತ್ಯವನ್ನ ಸಿಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ, ಕುಮಾರಸ್ವಾಮಿನ ಹೇಗೆ ಮುಗಿಸಬೇಕು ಅನ್ನೋ ಪ್ಲಾನ್ ಮಾಡ್ತಿದ್ದಾರೆ, ಕುಮಾರಸ್ವಾಮಿಯನ್ನ ಜೈಲಿಗೆ ಹಾಕೋಕೆ ಪ್ರಯತ್ನ ನಡೆಯುತ್ತಿದೆ. ಹೌದು, ಯಾವುದೋ ಹಳೇ ಕೇಸ್ ಹುಡುಕುತ್ತಿದ್ದಾರೆ ಎಂದು ಹೇಳಿದ್ದಾರೆ.
ನೀವು ನನ್ನ ಮೇಲೆ ಏನ್ ಬೇಕಾದರೂ ಮಾಡಿ, ನಾನು ರಾಜಕಾರಣ ನಿಧಾನವಾಗಿ ಮಾಡ್ತೀನಿ. ನನಗೀಗ ಅಭಿವೃದ್ಧಿಯಷ್ಟೇ.. ರಾಜಕಾರಣ ಆಮೇಲೆ ಮಾಡ್ತೀನಿ ಎಂದು ಹೆಚ್.ಡಿ. ಕುಮಾರಸ್ವಾಮಿ
ವಿರೋಧಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ನಿರ್ದೇಶನದತ್ತ ಮುಖ ಮಾಡಿದ ಪತ್ರಕರ್ತೆ ಸುನಯನಾ ಸುರೇಶ್..!
Post Views: 65