ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಮಾಸುವ ಮುನ್ನವೇ ದರ್ಶನ್ ಕೇಸ್ ಎಫೆಕ್ಟ್ನಿಂದಾಗಿ ಬೆಂಗಳೂರು ಶೆಡ್ನಲ್ಲಿ ಮತ್ತೊಂದು ಮರ್ಡರ್ ನಡೆದಿದೆ. ITC ಉದ್ಯೋಗಿ ಸುಮಾರು 35 ವರ್ಷದ ಅಜಿತ್ ಕೊಲೆಯಾದ ವ್ಯಕ್ತಿ.
ಮೃತ ಅಜಿತ್ನನ್ನು ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗುಂಟೆಯಲ್ಲಿರುವ ಶೆಡ್ಗೆ ಬಾ ಎಂದು ಕಿರಾತಕರು ಕರೆದಿದ್ದರು. ಅಜಿತ್ ಶೆಡ್ಗೆ ಬರ್ತಿದ್ದಂತೆ ಹಂತಕರು ಬಟ್ಟೆ ಬಿಚ್ಚಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಇನ್ನು ITC ಉದ್ಯೋಗಿ ಅಜಿತ್ನನ್ನು ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಂಬೆಳಗ್ಗೆ ಬೆಂಗಳೂರಿನ ಕಾಕ್ಸ್ ಟೌನ್ ಸಮೀಪದ ಶೆಡ್ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾದ ಆರೋಪಿಗಾಗಿ ಪುಲಿಕೇಶಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಚಿತ್ರನಟಿಯರಿಗೆ, ಸೋಶಿಯಲ್ ಮೀಡಿಯಾ ಸ್ಟಾರ್ಗಳಿಗೆ, ಯೂಟ್ಯೂಬರ್ಸ್ಗೆ ಕ್ಯಾಕರಿಸಿ ಉಗಿದ ರೇಣುಕಾಸ್ವಾಮಿ ತಂದೆ..!
Post Views: 1,394