Download Our App

Follow us

Home » ಅಪರಾಧ » ಬೆಂಗಳೂರು ಶೆಡ್​ನಲ್ಲಿ ಮತ್ತೊಂದು ಮರ್ಡರ್ ​​- ದರ್ಶನ್​​ ಕೇಸ್​ ಎಫೆಕ್ಟ್​​​ನಿಂದ ಕೊಲೆ ಅಡ್ಡೆಯಾಗ್ತಿವೆ ಶೆಡ್​..!

ಬೆಂಗಳೂರು ಶೆಡ್​ನಲ್ಲಿ ಮತ್ತೊಂದು ಮರ್ಡರ್ ​​- ದರ್ಶನ್​​ ಕೇಸ್​ ಎಫೆಕ್ಟ್​​​ನಿಂದ ಕೊಲೆ ಅಡ್ಡೆಯಾಗ್ತಿವೆ ಶೆಡ್​..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ​​ಮಾಸುವ ಮುನ್ನವೇ ದರ್ಶನ್​​ ಕೇಸ್​ ಎಫೆಕ್ಟ್​​ನಿಂದಾಗಿ ಬೆಂಗಳೂರು ಶೆಡ್​ನಲ್ಲಿ ಮತ್ತೊಂದು ಮರ್ಡರ್ ನಡೆದಿದೆ. ITC ಉದ್ಯೋಗಿ ಸುಮಾರು 35 ವರ್ಷದ ಅಜಿತ್ ಕೊಲೆಯಾದ ವ್ಯಕ್ತಿ.

ಮೃತ ಅಜಿತ್​​ನನ್ನು ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗುಂಟೆಯಲ್ಲಿರುವ  ಶೆಡ್​​ಗೆ ಬಾ ಎಂದು ಕಿರಾತಕರು ಕರೆದಿದ್ದರು. ಅಜಿತ್ ಶೆಡ್​ಗೆ ಬರ್ತಿದ್ದಂತೆ ಹಂತಕರು ಬಟ್ಟೆ ಬಿಚ್ಚಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಇನ್ನು ITC ಉದ್ಯೋಗಿ ಅಜಿತ್​​ನನ್ನು ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಂಬೆಳಗ್ಗೆ ಬೆಂಗಳೂರಿನ ಕಾಕ್ಸ್ ಟೌನ್ ಸಮೀಪದ ಶೆಡ್​ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾದ ಆರೋಪಿಗಾಗಿ ಪುಲಿಕೇಶಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಚಿತ್ರನಟಿಯರಿಗೆ, ಸೋಶಿಯಲ್ ಮೀಡಿಯಾ ಸ್ಟಾರ್​​​ಗಳಿಗೆ, ಯೂಟ್ಯೂಬರ್ಸ್​ಗೆ ಕ್ಯಾಕರಿಸಿ ಉಗಿದ ರೇಣುಕಾಸ್ವಾಮಿ ತಂದೆ..!

 

 

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here