Download Our App

Follow us

Home » ಸಿನಿಮಾ » ಮೆಗಾಸ್ಟಾರ್ ಚಿರಂಜೀವಿ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್ – ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ..!

ಮೆಗಾಸ್ಟಾರ್ ಚಿರಂಜೀವಿ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್ – ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ..!

ಟಾಲಿವುಡ್​ನ ಖ್ಯಾತ ನಟ ಮೆಗಾ ಸ್ಟಾರ್​ ಚಿರಂಜೀವಿ ಫ್ಯಾಮಿಲಿಯಲ್ಲಿ ಮತ್ತೊಂದು ವಿಚ್ಛೇದನವಾಗುವ ಸಾಧ್ಯತೆ ಇದೆ ಎಂದು ಪ್ರಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ. ಮೆಗಾಸ್ಟಾರ್‌ ಸಹೋದರ ನಾಗಬಾಬು ಅವರ ಪುತ್ರ ವರುಣ್‌ ತೇಜ್‌ ಮತ್ತು ಲಾವಣ್ಯ ತ್ರಿಪಾಠಿ ನಡುವೆ ಡಿವೋರ್ಸ್ ಆಗುವ ಸಾಧ್ಯತೆಯಿದೆ ಎಂದು ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ  ಜ್ಯೋತಿಷಿ ವೇಣು ಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಜ್ಯೋತಿಷಿ ವೇಣು ಸ್ವಾಮಿಯವರು ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿ ಭವಿಷ್ಯ ಹೇಳುವ ಮೂಲಕವೇ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಹೆಚ್ಚು ಪ್ರಖ್ಯಾತರಾಗಿದ್ದಾರೆ.  ಪ್ರಭಾಸ್ ಅವರಂತಹ ಅನೇಕರು ಸೆಲೆಬ್ರಿಟಿಗಳ ಜಾತಕ ಹೇಳಿ ವೇಣು ಸ್ವಾಮಿ ಈ ಹಿಂದೆ ಶಾಕ್ ಕೊಟ್ಟಿದ್ದರು. ಪ್ರಭಾಸ್‌ ಕುರಿತಾದ ಜಾತಕ ಹೇಳುವ ಮೂಲಕ ಇವರು ಇನ್ನಷ್ಟು ಪ್ರಖ್ಯಾತಿಗಳಿಸಿದ್ದರು.

ಇದೀಗ ಜ್ಯೋತಿಷಿ ವೇಣುಸ್ವಾಮಿಯವರು ಮೆಗಾಸ್ಟಾರ್‌ ಕುಟುಂಬದ ಕುರಿತಾಗಿ ಭವಿಷ್ಯ ಹೇಳಿದ್ದು, ಅವರ ಮಾತನ್ನು ಕೇಳಿ ಫ್ಯಾನ್ಸ್‌ ಆಘಾತ ವ್ಯಕ್ತಪಡಿಸಿದ್ದಾರೆ. ಮೆಗಾಸ್ಟಾರ್‌ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ವಿಚ್ಛೇದನವಾಗಬಹುದು, ಅಥವಾ ತಡವಾಗಿಯಾದರೂ ಆಗಬಹುದು ಎಂದು ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ.

ಹೌದು, ಮೆಗಾಸ್ಟಾರ್‌ ಸಹೋದರ ನಾಗಬಾಬು ಅವರ ಪುತ್ರ ವರುಣ್‌ ತೇಜ್‌ ಹಾಗೂ ನಟಿ ಲಾವಣ್ಯ ತ್ರಿಪಾಠಿ ಅವರ ಅದ್ದೂರಿ ಮದುವೆಯಾಗಿ ಆರು ತಿಂಗಳಷ್ಟೇ ಆಗಿದೆ. ಆದರೆ, ಈ ಮದುವೆ ಹೆಚ್ಚು ದಿನ ಉಳಿಯೋದಿಲ್ಲ ಎಂದು ವೇಣುಸ್ವಾಮಿ ತಿಳಿಸಿದ್ದಾರೆ. ಅವರಿಬ್ಬರೂ ಜೊತೆಯಾಗಿರುವುದು ದೊಡ್ಡ ಪವಾಡ ಎಂದು ವೇಣು ಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಾನು ಹೇಳುವ ಮಾತಿಗೆ ಎಲ್ಲರೂ ನನ್ನು ಟೀಕೆ ಮಾಡಬಹುದು. ಆದರೆ, ಇದು ಅವರ ಜಾತಕದಲ್ಲಿದೆ. ವೈಯಕ್ತಿಕವಾಗಿ ಅವರೊಂದಿಗೆ ನನಗೆ ಯಾವುದೇ ಜಗಳವೂ ಇಲ್ಲ, ಆತ್ಮೀಯತೆಯೂ ಇಲ್ಲ ಎಂದಿದ್ದಾರೆ.

ಲಾವಣ್ಯ ತ್ರಿಪಾಠಿಗೆ ಗುರುದೋಷ, ವರುಣ ತೇಜ್‌ಗೆ ನಾಗದೋಷವಿದೆ ಎಂದೂ ಅವರು ಹೇಳಿದ್ದಾರೆ. ಇದರೊಂದಿಗೆ ನಾಗದೋಷ, ಕುಜದೋಷ ಲಾವಣ್ಯಳನ್ನು ಕಾಡುತ್ತಿದ್ದು, ಇಂತಹ ದೋಷಗಳ ನಡುವೆಯೂ ಇವರಿಬ್ಬರು ಜೊತೆಯಾಗಿರುವುದು ದೊಡ್ಡ ಪವಾಡವೇ ಸರಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುಮಾರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಕಳೆದ ವರ್ಷ ನವೆಂಬರ್ 1 ರಂದು ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು.

ಇದನ್ನೂ ಓದಿ : ಇಂದು ವರನಟ ಡಾ.ರಾಜ್‌ಕುಮಾರ್‌ ಜನ್ಮದಿನ – ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ಕನ್ನಡದ ಕಣ್ಮಣಿ..!

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here