Download Our App

Follow us

Home » ಅಪರಾಧ » ಆನೇಕಲ್​​ನಲ್ಲಿ ಪುಡಿ ರೌಡಿಗಳ ಅಟ್ಟಹಾಸ – ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹ*ಲ್ಲೆ..!

ಆನೇಕಲ್​​ನಲ್ಲಿ ಪುಡಿ ರೌಡಿಗಳ ಅಟ್ಟಹಾಸ – ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹ*ಲ್ಲೆ..!

ಆನೇಕಲ್ :  ಪುಡಿ ರೌಡಿಗಳು ಎಲ್ಲೆಡೆ ರಾಜರೋಷವಾಗಿ ಓಡಾಡುತ್ತ ಅಟ್ಟಹಾಸದಿಂದ ಮೇರೆಯುತ್ತಿದ್ದಾರೆ. ಇದೀಗ ಕ್ಷುಲ್ಲಕ ಕಾರಣಕ್ಕೆ ಪುಡಿ ರೌಡಿಗಳು  ವ್ಯಕ್ತಿಯೋರ್ವನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ. ಅಂಕಿತ್​​ ಎಂಬಾತ ಹಲ್ಲೆಗೆ ಒಳಾಗದ ವ್ಯಕ್ತಿಯಾಗಿದ್ದಾನೆ.

ಟಿಟಿಯಲ್ಲಿ ಬಂದಿದ್ದ ಶ್ರೀಧರ್​ನಿಂದ ಎಂಬಾತ ಅಂಕಿತ್ ಮೆಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಭಯಗೊಂಡ ಅಂಕಿತ್ ಹಲ್ಲೆ ಮಾಡುತ್ತಿದ್ದಂತೆ ಸುನೀಲ್​ ಮತ್ತು ಕಾರ್ತಿಕ್ ಎಂಬುವವರಿಗೂ ಕರೆ ಮಾಡಿದ್ದಾನೆ.

ಗಲಾಟೆ ಬಿಡಿಸಲು ಸ್ಥಳಕ್ಕೆ ಬಂದ ಸುನೀಲ್​ ಮತ್ತು ಕಾರ್ತಿಕ್ ಮೇಲೂ ಪುಡಿ ರೌಡಿಗಳಾದ  ಕಿಶೋರ್, ಶ್ರೀಧರ್, ವಾಲೆಮಂಜ, ಹೇಮಂತ್, ಮನೋಜ್, ತುಕಡಿ@ವೆಂಕಟರಾಜು ಎಂಬವರು ಚಾಕುವಿನಿಂದ ಇರಿದಿದ್ದಾರೆ. ಪುಡಿ ರೌಡಿಗಳ ಗುಂಪಲ್ಲಿದ್ದ ಕಿಶೋರ್ ಎಂಬಾತ ಇತ್ತೀಚೆಗೆ ಅಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ. ಇನ್ನು ಹಲ್ಲೆಗೊಳಗಾದ ಕಾರ್ತಿಕ್, ಸುನೀಲ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘನೆ – ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ದ FIR ದಾಖಲು..!

Leave a Comment

DG Ad

RELATED LATEST NEWS

Top Headlines

ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

Live Cricket

Add Your Heading Text Here