ಬೆಂಗಳೂರು : ಆರೋಪಿಯನ್ನು 9 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದ ಆರೋಪದಡಿ ಅಮೃತಹಳ್ಳಿ ಠಾಣೆ ಮೇಲೆ ಮಾನವಹಕ್ಕುಗಳ ಆಯೋಗ ದಾಳಿ ಮಾಡಿತ್ತು. ಈ ಪ್ರಕರಣ ಸಂಬಂಧ ಪೊಲೀಸ್ ಇನ್ಸ್ಪೆಕ್ಟರ್ ಅಂಬರೀಶ್ಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಮಾನವ ಹಕ್ಕು ಆಯೋಗ ಸೂಚನೆ ನೀಡಿದೆ.
DySP ಸುಧೀರ್ ಹೆಗ್ಡೆಯವರು ಇನ್ಸ್ಪೆಕ್ಟರ್ ಅಂಬರೀಶ್ ಅವರನ್ನು ವಿಚಾರಣೆ ಮಾಡಲಿದ್ದಾರೆ. ಸ್ಟೇಷನ್ ಡೈರಿ, ಸಿಸಿಟಿವಿ ವಿಶ್ಯುವಲ್ಸ್ ಸಮೇತ ಬರಲು ಸೂಚನೆ ನೀಡಿದ್ದು, ಇನ್ಸ್ಪೆಕ್ಟರ್ ಅಂಬರೀಶ್ ಅವರ ವಿಚಾರಣೆ ಬಳಿಕ ಮತ್ತಷ್ಟು ಜನರ ವಿಚಾರಣೆ ನಡೆಯಲಿದೆ. ಸಂಪೂರ್ಣ ಮಾಹಿತಿಯೊಂದಿಗೆ ವಿಚಾರಣೆಗೆ ಹಾಜರಾಗಲು ಮಾನವ ಹಕ್ಕು ಆಯೋಗ ಸೂಚನೆ ನೀಡಿದೆ.
ಪ್ರಕರಣ : ಆರೋಪಿಯೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದ ಆರೋಪದಡಿ ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿದೆ. ಯಾಸಿನ್ ಮೆಹಬೂಬ್ ಖಾನ್ನ್ನು ಇನ್ಸ್ಪೆಕ್ಟರ್ ಅಂಬರೀಶ್ ಸೂಚನೆ ಮೇರೆಗೆ ಕರೆತಂದಿದ್ದ ಆರೋಪ ಕೇಳಿಬಂದಿದೆ. 9 ದಿನಗಳ ಕಾಲ ಇನ್ಸ್ಪೆಕ್ಟರ್ ಅಂಬರೀಶ್ ಅಕ್ರಮವಾಗಿ ಬಂಧನದಲ್ಲಿರಿಸಿದ್ದರು.
ಆರೋಪಿಯನ್ನು ಬಂಧಿಸಲು ಕ್ರೈಂ ಕಾನ್ಸ್ಟೇಬಲ್ಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮುಂಬೈಗೆ ಹೋಗಿದ್ರು. ಕಾನ್ಸ್ಟೇಬಲ್ಗಳು ರೂಲ್ಸ್ ವೈಲೇಶನ್ ಮಾಡಿ ಅಕ್ರಮ ಬಂಧನದಲ್ಲಿ ಇಟ್ಟಿದ್ದು ಸಾಬೀತಾಗಿತ್ತು. ಇದೇ ಇನ್ಸ್ಪೆಕ್ಟರ್ ಅಂಬರೀಶ್ ಮೇಲೆ 3 ವರ್ಷಗಳ ಹಿಂದೆಯೊಂದು ಗಂಭೀರ ಆರೋಪವಿತ್ತು.
ಇದನ್ನೂ ಓದಿ : ಡಿಕೆ ಶಿವಕುಮಾರ್ ವಿರುದ್ದ ಆಸ್ತಿ ಗಳಿಕೆ ಕೇಸ್ : ಫೆ. 29ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ..!