Download Our App

Follow us

Home » ಜಿಲ್ಲೆ » ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಸಾಬೀತು : ಮಂಡ್ಯ PWD ಇಇ H.R ಹರ್ಷ ಸಸ್ಪೆಂಡ್..!

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಸಾಬೀತು : ಮಂಡ್ಯ PWD ಇಇ H.R ಹರ್ಷ ಸಸ್ಪೆಂಡ್..!

ಮಂಡ್ಯ : ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ಮಂಡ್ಯ PWD ಇಇ H.R ಹರ್ಷ ಅವರನ್ನು ಅಮಾನತು ಮಾಡಲಾಗಿದೆ. ಇಇ H.R ಹರ್ಷ ಅವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆಯ ಮುರುಳೀಧರ್ ತಳ್ಳೀಕೆರೆ ಆದೇಶ ಹೊರಡಿಸಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಆರೋಪ ಹರ್ಷ ಅವರ ಮೇಲಿತ್ತು, ಇದೀಗ ಅದು ಸಾಬೀತಾಗಿದೆ.

ಅಲ್ಲದೆ ಅಕ್ರಮ ಭ್ರಷ್ಟಾಚಾರದ ಆರೋಪದಿಂದಾಗಿ ಇಇ H.R ಹರ್ಷ ಅವರ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ಕೂಡ ದಾಳಿ ನಡೆದಿತ್ತು. ಲೋಕಾಯುಕ್ತ ದಾಳಿಯ ವೇಳೆ ಭ್ರಷ್ಟ ಅಧಿಕಾರಿಯ ಅಕ್ರಮ ಆಸ್ತಿ ಗಳಿಕೆ ಸಾಬೀತಾಗಿದೆ. ಆರೋಪ ಸಾಬೀತಾಗಿ ಅಧಿಕಾರಿ ಕ್ರಿಮಿನಲ್ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದರು. ಇಇ ಹರ್ಷ ಅವರ ಪರಿಶೀಲನಾ ಅವಧಿಯಲ್ಲಿ ₹ 1.40 ಕೋಟಿ ಆದಾಯ ಹೊಂದಿದ್ದು, ₹ 1.25ಕೋಟಿ ಖರ್ಚು, ₹14.50ಕೋಟಿ ಉಳಿತಾಯ‌‌ ಹೊಂದಿದ್ದರು.

ಆದರೆ ತನಿಖೆ ವೇಳೆ ₹ 3.33ಕೋಟಿ ಆಸ್ತಿಯಲ್ಲಿ ₹ 3.19ಕೋಟಿ ಅಂದರೆ ಆದಾಯಕ್ಕಿಂತ ಶೇ.227.416ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಮಾಡಿರುವ ಬಗ್ಗೆ ಲೋಕಾಯುಕ್ತ ಆರೋಪಿಸಿದೆ.
ಲೋಕಾಯುಕ್ತ ತನಿಖೆ‌ ಹಿನ್ನಲೆಯಿಂದಾಗಿ ಅಧಿಕಾರಿ ಹೆಚ್.ಆರ್.ಹರ್ಷ ರನ್ನ ಅಮಾನತ್ತು ಗೊಳಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ : ಹೆಚ್​ಡಿಕೆ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಸುಮಲತಾ ದಿಢೀರ್​ ಮೀಟಿಂಗ್​​ – ಬಿಜೆಪಿಯಿಂದ ಹಿಂದೆ ಸರಿದು NDA ಅಭ್ಯರ್ಥಿ ಪರ ಕೆಲಸ ಮಾಡ್ತಾರಾ ..?

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here