ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಟ್ರ್ಯಾಕ್ ಮೇಲೆ ಹಾರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮುಂಬೈ ಮೂಲದ 20 ವರ್ಷದ ಕಾನೂನು ವಿದ್ಯಾರ್ಥಿ ಧ್ರುವ ಎಂಬಾತ ಮಧ್ಯಾಹ್ನ 2.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿಲ್ದಾಣಕ್ಕೆ ಎಂಟ್ರಿ ಕೊಡ್ತಿದ್ದಂತೆ ವಿದ್ಯಾರ್ಥಿ ಟ್ರ್ಯಾಕ್ ಮೇಲೆ ಜಿಗಿದಿದ್ದು, ಮೆಟ್ರೋ ರೈಲು ಹರಿದು ಯುವಕನ ದೇಹ ಪೀಸ್..ಪೀಸ್ ಆಗಿದೆ. ರೈಲು ಹರಿದ ರಭಸಕ್ಕೆ ರುಂಡ-ಮುಂಡ ಬೇರ್ಪಟ್ಟು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೆಟ್ರೋ ಟ್ರ್ಯಾಕ್ ಮೇಲೆನೇ ಇರುವ ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆಯೋಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಗಿರೀಶ್, FSL ತಂಡ ಭೇಟಿ ನೀಡಿ ಸ್ಥಳ ಮೊಹಜರು ಮಾಡಿದ್ದಾರೆ. ಈ ಘಟನೆಯಿಂದಾಗಿ ಅತ್ತಿಗುಪ್ಪೆ – ಚಲ್ಲಘಟ್ಟ ಮಧ್ಯೆ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ. ವಿಜಯನಗರ- ವೈಟ್ಫೀಲ್ಡ್ವರಗೆ ಮಾತ್ರ ರೈಲು ಸಂಚಾರವಾಗುತ್ತಿದೆ. ಮೆಟ್ರೋ ಟ್ರೇನ್ ಸಂಚಾರ ವ್ಯತ್ಯಯ ಕುರಿತು BMRCL ಮಾಹಿತಿ ನೀಡಿದ್ದು, ದಿಢೀರ್ ಘಟನೆಯಿಂದ ಮೆಟ್ರೋ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಚಂದ್ರಾಲೇಔಟ್ ಪೊಲೀಸರು ಸಿಸಿಟಿವಿ ದೃಶ್ಯ ಚೆಕ್ ಮಾಡಿದ್ದು, ಆತ ಮೆಟ್ರೋ ನಿಲ್ದಾಣಕ್ಕೆ ಎಂಟ್ರಿ ಆದ ಸಮಯ. ಮೆಟ್ರೋ ನಿಲ್ದಾಣದಲ್ಲಿ ಓಡಾಡಿದ ದೃಶ್ಯ. ಆತನ ಜೊತೆ ಬೇರೆಯವರು ಮಾತನಾಡಿರುವ ದೃಶ್ಯ, ಟ್ರ್ಯಾಕ್ ಬಳಿ ಎಷ್ಟು ಗಂಟೆಗೆ ಬಂದ ಅನ್ನೋ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಸ್ವಾರ್ಥಕ್ಕಾಗಿ ಪಕ್ಷವನ್ನೇ ತಮ್ಮ ಕುಟುಂಬ ಮಾಡಿಕೊಳ್ಳಲು ಹೊರಟಿದ್ದಾರೆ : ಬಿಎಸ್ವೈ ವಿರುದ್ಧ ಡಿವಿಎಸ್ ವಾಗ್ದಾಳಿ..!