ಬೆಂಗಳೂರು : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಓರ್ವ ಶಂಕಿತನನ್ನು NIA ತಂಡ ವಶಕ್ಕೆ ಪಡೆದಿದೆ. ಅನುಮಾನದ ಮೇಲೆ ಮಿನಾಜ್ @ ಸುಲೇಮಾನ್ನ್ನು NIA ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಿನಾಜ್ ಬಳ್ಳಾರಿ ಕೌಲ್ ಬಜಾರ್ನ ನಿಷೇಧಿತ PFI ಕಾರ್ಯಕರ್ತನಾಗಿದ್ದು, ISIS ಜೊತೆ ನಂಟು ಹಿನ್ನೆಲೆ ಕಳೆದ ಡಿಸೆಂಬರ್ನಲ್ಲಿ ಮಿನಾಜ್ನ್ನು NIA ಬಂಧಿಸಿತ್ತು. ಅಂದಿನಿಂದ ಜೈಲಿನಲ್ಲಿದ್ದ ಮಿನಾಜ್ನನ್ನು ಬಾಡಿ ವಾರೆಂಟ್ ಮೇಲೆ NIA ಪಡೆದಿದೆ. ಬಾಂಬ್ ಇಟ್ಟವನ ಬಗ್ಗೆ ಸುಳಿವಿಗಾಗಿ ತೀವ್ರ ವಿಚಾರಣೆ ನಡೆಯುತ್ತಿದ್ದು, ಜೈಲಿನಲ್ಲಿ ದೊರೆತ ಕೆಲ ಮಾಹಿತಿಗಳ ಆಧಾರದ ಮೇಲೆ ಈತನ್ನು ವಶಕ್ಕೆ ಪಡೆಯಲಾಗಿದೆ.
ಬಾಂಬ್ ಇಟ್ಟವನಿಗೂ ಈತನಿಗೂ ಸಂಬಂಧ ಇದ್ಯಾ ಎಂದು ವಿಚಾರಣೆ ನಡೆಯಲಿದೆ. ಡಿಸೆಂಬರ್ನಲ್ಲಿ ಮೀನಾಜ್ ಸೇರಿ 8 ಮಂದಿ ಶಂಕಿತರನ್ನು NIA ಬಂಧಿಸಿತ್ತು, ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿಯಲ್ಲಿ NIA ರೇಡ್ ನಡೆದಿತ್ತು. ಶಂಕಿತರ ಬಳಿ IED ತಯಾರಿಸಲು ಬಳಸುವ ವಸ್ತುಗಳು ಪತ್ತೆಯಾಗಿತ್ತು, ಹಾಗಾಗಿ ಇದೀಗ ಬಾಂಬರ್ ಜತೆ ಮಿನಾಜ್ ಲಿಂಕ್ ಇರುವ ಶಂಕೆ ಮೇಲೆ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ಡೂಪ್ಲಿಕೇಟ್ ಕಾಂಗ್ರೆಸ್ ಮುಖಂಡರಿಗೆ ನಿಗಮ-ಮಂಡಳಿ ಸ್ಥಾನ ತಪ್ಪಿಸಿದ್ದು ನಾವೇ : K.H.ಮುನಿಯಪ್ಪಗೆ ಕೊತ್ತೂರು ಮಂಜುನಾಥ್ ಟಾಂಗ್..!