ವಿಜಯಪುರ : ಪ್ರಚೋದನಕಾರಿ ಭಾಷಣ ಮಾಡಿರುವ ಹಿನ್ನೆಲೆ ಇಬ್ಬರು ಶಾಸಕರ ಮೇಲೆ FIR ದಾಖಲಾಗಿದೆ. ಮಾರ್ಚ್ 4ರಂದು ವಿಜಯಪುರ ನಗರದ ಶಿವಾಜಿ ಸರ್ಕಲ್ನಲ್ಲಿ ನಡೆದಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ವೇಳೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ತೆಲಂಗಾಣದ ಗೋಶಾಮಹಾಲ ಶಾಸಕ ಟಿ. ರಾಜಾಸಿಂಗ್ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದರು.
ಶಿವಾಜಿ ಸರ್ಕಲ್ನಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ‘ಅಬ್ ಗಲಿ ಗಲಿ ಮೇ ಅಫ್ಜಲ್ ಖಾನ್, ಔರಂಗಜೇಬ್ ಹೈ.. ಅಬ್ ಗಲಿಗಲಿ ಮೇ ಶಿವಾಜಿ ಮಹಾರಾಜ್ ಬನಾನ ಹೈ. ಅಗರ್ ಮೇರಾ ಹಾತ್ ಮೇ ಹೋಂ ಮಿನಿಸ್ಟರ್ ರಹಾತೋ, ಗುಸ್ಕೆ ಎನ್ಕೌಂಟರ್ ಕರ್ತೇತೆ, ಎಂದು ರಾಜಾ ಸಿಂಗ್ ಮತ್ತು ಯತ್ನಾಳ್ ಅವರು ಪ್ರಚೋದನಕಾರಿ ಹೇಳಿಕೆಯನ್ನು ಕಾರ್ಯಕ್ರಮದಲ್ಲಿ ನೀಡಿದ್ದರು.
ಈ ಹಿನ್ನೆಲೆ ಇದೀಗ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶಾಸಕ ಟಿ. ರಾಜಾಸಿಂಗ್ ವಿರುದ್ಧ ಕಲಂ: 153, 506, 504, 505(2) IPC ಅಡಿಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಕೇಸ್ – ಆರೋಪಿ ಬಗ್ಗೆ ಸಿಸಿಟಿವಿಯಲ್ಲಿ ಮಹತ್ವದ ಸಾಕ್ಷ್ಯ ಬಯಲು..!