ಬೆಂಗಳೂರು : ಫಾರಿನ್ನಿಂದ ವಾಪಸ್ ಬಂದು ನೆಲೆಸಿದ್ದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರಜೆಗೆ ಹೊಡೆದು ಕಿಡ್ನಾಪ್ ಮಾಡಿದ್ದ ಕೇಸ್ನಲ್ಲಿ ಬೊಮ್ಮನಹಳ್ಳಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಮಾಸ್ಟರ್ ಮೈಂಡ್ ಮೋನಿಷಾ, ಲೋಕೇಶ್, ಕಿಶೋರ್, ರವಿ, ದಿಲೀಪ್, ಸತೀಶ್ ಸೇರಿ 6 ಮಂದಿ ಬಂಧಿತರು. ಬೊಮ್ಮನಹಳ್ಳಿ ನಿವಾಸಿ ಅಮಿತ್ ರಾಣಾನನ್ನು ಡ್ರಗ್ಸ್ ಕೊಡ್ತೀನಿ ಎಂದು ಕರೆಸಿಕೊಂಡು ಸುಲಿಗೆ ಮಾಡಿದ್ರು. ಆತನ ಸಹೋದರ ಅಲೋಕ್ ರಾಣಾ ಆಸ್ಟ್ರೇಲಿಯಾ ಪ್ರಜೆಯಾಗಿದ್ದು, ಅಣ್ಣ ಅಮಿತ್ ನೋಡಲು ಬೆಂಗಳೂರಿಗೆ ಅಲೋಕ್ ರಾಣಾ ಬಂದಿದ್ದರು.
ಡ್ರಗ್ಸ್ ಅಡಿಕ್ಟ್ ಆಗಿದ್ದ ಅಲೋಕ್ ರಾಣಾ ಡಾರ್ಕ್ ವೆಬ್ ಮೂಲಕ ಮೋನಿಷ್ ಸಂಪರ್ಕ ಮಾಡಿದ್ದರು. ಮೋನಿಷ್ ನಿಂದ ಐದು ಬಾರಿ ಗಾಂಜಾ ಖರೀದಿಸಿದ್ದರು. ಅಲೋಕ್ ರಾಣಾ ಬಳಿ ಹೆಚ್ಚಿನ ಹಣ ಇರಬಹುದು ಎಂದು ಭಾವಿಸಿ ಮೋನಿಷ್, ಅಲೋಕ್ ರಾಣಾ ಕಿಡ್ನಾಪ್ಗೆ ಪ್ಲಾನ್ ಮಾಡಿ ಬೊಮ್ಮನಹಳ್ಳಿ ಬಳಿ ಡ್ರಗ್ಸ್ ಕೊಡುವುದಾಗಿ ಕರೆಸಿದ್ದರು.
ಈ ವೇಳೆ ರೂಮ್ ನಲ್ಲಿ ಕೂಡಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ರು. ಬಳಿಕ ಅಲೋಕ್ ರಾಣಾ ಅಕೌಂಟ್ ನಿಂದ 78 ಸಾವಿರ ಹಣ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದರು. ಆನಂತರ ಅಲೋಕ್ ಅಣ್ಣನಿಗೆ ಕರೆ ಮಾಡಿಸಿ 40 ಸಾವಿರ ಹಣ ವಸೂಲಿ ಮಾಡಿದ್ರು. ತಪ್ಪಿಸಿಕೊಂಡು ಬಂದಿದ್ದ ಅಲೋಕ್ ರಾಣಾ ಆಸ್ಪತ್ರೆಗೆ ಸೇರಿದ್ದರು, ಡ್ರಗ್ಸ್ ಸೇವನೆ ಕೇಸ್ನಲ್ಲಿ ಸಿಕ್ಕಿ ಬೀಳ್ತೀನಿ ಅಂತಾ ದೂರು ಕೊಟ್ಟಿರಲಿಲ್ಲ. 15 ದಿನ ಕಳೆದ ನಂತರ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ : ಗದಗ : ಸೈಡ್ಗೆ ಹೋಗು ಎಂದಿದ್ದಕ್ಕೆ ಬಸ್ಸಿನ ಗಾಜು ಪೀಸ್ ಪೀಸ್ ಮಾಡಿದ ಯುವಕ..!