ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ ‘ಅಗ್ನಿಸಾಕ್ಷಿ’ ಶೀರ್ಷಿಕೆ ಈಗ ಮತ್ತೆ ಕನ್ನಡಿಗರ ಮನೆಮನ ಬೆಳಗಲು ಸಜ್ಜಾಗಿದೆ. ಕೌಟುಂಬಿಕ ಮನರಂಜನೆಯಲ್ಲಿ ಸದಾ ಮುಂಚೂಣಿಯಲ್ಲಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಇದೇ ಜೂನ್ 8ರಿಂದ ಸಂಜೆ 7:00 ಗಂಟೆಯ ಪ್ರೈಮ್ ಟೈಮ್ ಸ್ಲಾಟ್ನಲ್ಲಿ ಹೊಚ್ಚ ಹೊಸ ಕಥಾಹಂದರ ಹೊಂದಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯನ್ನು ಹೊತ್ತು ತರುತ್ತಿದೆ.

ಇದು ಹಳೆಯ ಧಾರಾವಾಹಿಯ ಮುಂದುವರಿದ ಭಾಗವಲ್ಲ, ಬದಲಿಗೆ ಇಂದಿನ ತಲೆಮಾರಿನ ಯುವಮನಸ್ಸುಗಳ ಅಹಂಕಾರ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಹೈ-ವೋಲ್ಟೇಜ್ ಕಥೆಯಾಗಿದೆ. “ಇಬ್ಬರು ಕಣ್ಣುಂದೆ ಬಂದ್ರೆ ಸಹಿಸೋಕಾಗಲ್ಲ, ಕಾಣದೇ ಹೋದ್ರೆ ಬದುಕೋಕೇ ಆಗಲ್ಲ!” ಎಂಬ ವಿಶಿಷ್ಟ ಪ್ರೇಮಬಂಧದ ಎಳೆ ಈ ಕಥೆಯಲ್ಲಿದೆ. ಈ ಬಾರಿಯ ‘ಅಗ್ನಿಸಾಕ್ಷಿ’ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿತ್ವಗಳ ಎರಡು ಧ್ರುವಗಳ ನಡುವಿನ ಸಂಘರ್ಷ.

- ಅಗ್ನಿ (ನಾಯಕ): ಅವನು ಎಲ್ಲವನ್ನೂ ಧ್ವಂಸ ಮಾಡೋ ಬಿರುಗಾಳಿ ಅಷ್ಟೇ ಅಲ್ಲ, ತನ್ನ ಅಹಂಗೆ ಎದುರು ನಿಂತರೆ ‘ಅವನು ಎಲ್ಲವನ್ನೂ ಸುಟ್ಟು ಹಾಕೋ ಬೆಂಕಿ’ ಸಂಪತ್ತು ಮತ್ತು ವಿಪರೀತ ಗರ್ವದ ಹಿನ್ನೆಲೆಯುಳ್ಳ ಈ ಹಠಮಾರಿ ಉದ್ಯಮಿಯ ಪಾತ್ರಕ್ಕೆ ಗಾಯಕ ಹಾಗೂ ನಟ ಶಮಂತ್ ಬ್ರೋ ಗೌಡ ಜೀವ ತುಂಬಿದ್ದಾರೆ.
- ಸಾಕ್ಷಿ (ನಾಯಕಿ): ಅವಳು ಎಲ್ಲವನ್ನೂ ತಂಪಾಗಿಸೋ ತಂಗಾಳಿ ಆದರೆ ಅನ್ಯಾಯದ ವಿರುದ್ಧ ನಿಲ್ಲುವಾಗ, ಕತ್ತಲ ಹಾದಿಗೆ ‘ಅವಳು ದಾರಿ ತೋರಿಸೋ ಬೆಳಕು’. ಎಷ್ಟೇ ಕಷ್ಟ ಬಂದರೂ ತನ್ನ ಆತ್ಮಗೌರವವನ್ನು ಬಿಟ್ಟುಕೊಡದ ಈ ಧೀಮಂತ ಯುವತಿಯ ಪಾತ್ರದಲ್ಲಿ ನಟಿ ವರ್ಷಿಣಿ ಗೌಡ ನಟಿಸುತ್ತಿದ್ದಾರೆ.
ಹಸೆಮಣೆಯಲ್ಲಿ ಇವರಿಬ್ಬರ ಹಣೆಬರಹ ಹೇಗೆ ಒಂದಾಗಲಿದೆ, ಈ ಬೆಂಕಿ ಮತ್ತು ತಂಗಾಳಿಯ ನಡುವಿನ ಅಹಂ ಹಾಗೂ ಆದರ್ಶಗಳ ಹೋರಾಟ ಎತ್ತ ಸಾಗಲಿದೆ ಎನ್ನುವುದೇ ಇಡೀ ಸರಣಿಯ ಜೀವಾಳ.
ಈ ಹಿಂದಿನ ಸೂಪರ್ ಹಿಟ್ ‘ಅಗ್ನಿಸಾಕ್ಷಿ ‘ ಧಾರಾವಾಹಿಯ ಬರಹಗಾರರಾದ ಹ್ಯಾರಿಸ್ ಅವರೇ ಈ ಕಥೆಯನ್ನು ಬರೆಯುತ್ತಿದ್ದಾರೆ. ಇನ್ನು ಈ ಧಾರಾವಾಹಿಯು ಅತ್ಯುನ್ನತ ಮೇಕಿಂಗ್ ಹಾಗೂ ಶ್ರೀಮಂತ ದೃಶ್ಯವೈಭವದಿಂದ ಕೂಡಿರಲಿದೆ. ಬಾಂಧವ್ಯಗಳ ಹೊಸ ಆಯಾಮವನ್ನು ಪರಿಚಯಿಸಲಿರುವ ‘ಅಗ್ನಿಸಾಕ್ಷಿ’ ಜೂನ್ 8 ರಿಂದ ಇದೇ ಸೋಮವಾರದಿಂದ ಪ್ರತಿ ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೀಕ್ಷಕರು ಎಂದಿನಂತೆ ಈ ಹೊಸ ಪ್ರಯತ್ನಕ್ಕೂ ಪ್ರೀತಿ ಮತ್ತು ಬೆಂಬಲ ನೀಡಬೇಕಾಗಿ ವಿನಂತಿ.
ಇದನ್ನೂ ಓದಿ : ಅಧಿಕಾರಿಗಳ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಸಭೆ – ಭ್ರಷ್ಟಾಚಾರ ಕಡಿವಾಣಕ್ಕೆ ಖಡಕ್ ಸೂಚನೆ!









