ಸಬ್ ರಿಜಿಸ್ಟರ್​ಗಳ ಹೆಸರಿನಲ್ಲಿ ಕಳೆದ ಒಂದು ತಿಂಗಳಲ್ಲಿ ನೂರು ಕೋಟಿ ವಸೂಲಿ.. ಉಪಮುಖ್ಯಮಂತ್ರಿ ಪರಮೇಶ್ವರ್​ ಗಮನಕ್ಕೂ ಬಾರದೆ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ..!

ನಾಲ್ವರು ಪ್ರಳಯಾಂತಕರಿಂದ ನೂರಕ್ಕೂ ಹೆಚ್ಚು ಸಬ್ ರಿಜಿಸ್ಟರ್​ಗಳಿಂದ ಒಂದು ನೂರು ಕೋಟಿ ವಸೂಲಿ.. ಸೋಮಶೇಖರ ಎಂಬ ವ್ಯಕ್ತಿ ಮೂಲಕ ನಡೆಯುತ್ತಿರುವ ಮಹಾದಂಧೆ.. ಸೋಮಶೇಖರಿಗೆ ಸಾತ್ ಕೊಡುತ್ತಿರುವ ಹಿರಿಯ ನೋಂದಣಾಧಿಕಾರಿ ಯಶೋಧರ್.. ಯಶೋಧರ್ ಬೆಂಬಲಕ್ಕೆ ನಿಂತ ಅಸೋಸಿಯೇಷನ್ ಶಾಂತ ಮೂರ್ತಿ ಮತ್ತು ಲೋಕೇಶ್.. ನಿಮಗೆ ಬೇಕಾದ ಕಡೆ ಪೋಸ್ಟ್ ಕೊಡುತ್ತೇವೆ ಎಂದು 50 ಲಕ್ಷದಿಂದ 75 ಲಕ್ಷದವರೆಗೆ ಪ್ರತಿಯೊಬ್ಬರಿಂದ ವಸೂಲಿ..

ಆಡಳಿತ ವಿಭಾಗದ ಪ್ರಮುಖ ಹುದ್ದೆಯಾಗಿರುವ ಅಪಾರ್ಟ್ಮೆಂಟ್​ಗಳ ತೆರಿಗೆ ನಿರ್ಧರಿಸುವ ಸ್ಥಳದಲ್ಲಿ ಕುಂತಿರುವ ಯಶೋಧರ್.. ಅದೇ ರೀತಿ ಲೋಕೇಶ್​ಗೂ ಬೆಂಗಳೂರಿನಲ್ಲಿಯೇ ಆಡಳಿತದ ಹುದ್ದೆ.. ಹಲವು ಸ್ಟಾರ್ ಹೋಟೆಲ್​ಗಳು ಮತ್ತು ಅಪಾರ್ಟ್ಮೆಂಟ್‍ಗಳಲ್ಲಿ ನಡೆಯುತ್ತಿರುವ ಡೀಲ್..

ಡೀಲ್​ನ ಸಂಪೂರ್ಣ ಆಡಿಯೋ, ವಿಡಿಯೋ ದಾಖಲೆ ಸಮೇತ ದೂರು ದಾಖಲು.. ಜಾರಿ ನಿರ್ದೇಶನಾಲಯ ಎನ್ಫೋರ್ಸ್ಮೆಂಟ್ ಡೈರೆಕ್ಟ್ ಇಡಿಯಲ್ಲಿ ದಾಖಲಾಯಿತು ದೂರು.. ಉಪಮುಖ್ಯಮಂತ್ರಿಗಳ ಕಿವಿಗೂ ಬಿತ್ತು ಈ ಮಹಾ ದಂಧೆಯ ಕರ್ಮಕಾಂಡ.. ಈ ನಾಲ್ವರ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿಎಂ ಡಾ. ಜಿ ಪರಮೇಶ್ವರ್..

Btv Kannada
Author: Btv Kannada

Leave a Comment

Read More

Read More