Download Our App

Follow us

Home » ಅಪರಾಧ » ಕಬ್ಬನ್ ಪಾರ್ಕ್​ನಲ್ಲಿ ರೀಲ್ಸ್ ಮಾಡುವಾಗ ಅಡ್ಡ ಬಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ- ಪ್ರಕರಣ ದಾಖಲು..!

ಕಬ್ಬನ್ ಪಾರ್ಕ್​ನಲ್ಲಿ ರೀಲ್ಸ್ ಮಾಡುವಾಗ ಅಡ್ಡ ಬಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ- ಪ್ರಕರಣ ದಾಖಲು..!

ಬೆಂಗಳೂರು : ರೀಲ್ಸ್ ಮಾಡುವಾಗ ಅಡ್ಡ ಬಂದಿದ್ದಕ್ಕೆ ವ್ಯಕ್ತಿಯೋರ್ವರಿಗೆ ಹಲ್ಲೆ ಮಾಡಿರುವಂತಹ ಘಟನೆ ಕಬ್ಬನ್ ಪಾರ್ಕ್​ನಲ್ಲಿ ಕೆಲದಿನಗಳ ಹಿಂದೆ ನಡೆದಿರುವುದು ಬೆಳಕಿಗೆ ಬಂದಿದೆ. ರವಿಕಿರಣ್ ಎಂಬವವರು ಹಲ್ಲೆಗೊಳಗಾದ ವ್ಯಕ್ತಿ.

ಉತ್ತರ ಭಾರತದ ವ್ಯಕ್ತಿ ಕಬ್ಬನ್ ಪಾರ್ಕ್​ನಲ್ಲಿ ಫೋಟೋ ಶೂಟ್ ಹಾಗೂ ರೀಲ್ಸ್ ಮಾಡುತ್ತಿದ್ದನು. ಈ ವೇಳೆ ರವಿಕಿರಣ್ ಎಂಬುವವರು ಅಡ್ಡಹೋಗಿದ್ದರು. ಇದ್ದರಿಂದ ಸಿಟ್ಟಿಗೆದ್ದ ವ್ಯಕ್ತಿ  ರೀಲ್ಸ್ ಮಾಡುವಾಗ ಅಡ್ಡ ಬಂದ್ರೇ ಹುಷಾರ್ ಎಂದು ಅವಾಜ್ ಹಾಕಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ.

ಹಿಂದಿ‌ ಭಾಷೆಯಲ್ಲಿ ನಿಂದಿಸಿದ ವ್ಯಕ್ತಿ, ನಾನು ಫೋಟೋ ತೆಗೆಯುವಾಗ ನೀನ್ಯಾಕೆ ಅಡ್ಡ ಬಂದೆ ಎಂದು ನಿಂದಿಸಿ, ಪಾರ್ಕ್​ ನಿಮ್ಮಪ್ಪಂದ ಎಂದು ಬೈಯ್ದು ಹಲ್ಲೆ ನಡೆಸಿದ್ದಾರೆ. ಇನ್ನು ಘಟನೆಯ ಸಂಬಂಧ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ವರುಣ್ ಗಂಗಾಧರ್ ನಿರ್ದೇಶನದ ‘ಸ್ವರಾಜ್ಯ 1942’ ಚಿತ್ರದ ಟೀಸರ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ನಾನು ಮುಡಾ ಫೈಲ್​​​ಗಳನ್ನು ತಂದಿಲ್ಲ, ದೇವರ ಮುಂದೆ ಆಣೆ ಮಾಡೋಕೆ ನಾನ್​ ರೆಡಿ – ಸಚಿವ ಭೈರತಿ ಸುರೇಶ್..!

ಬೆಂಗಳೂರು : ಇಡೀ ರಾಜ್ಯದಲ್ಲೇ ದೊಡ್ಡ ಸುದ್ದಿಯಾಗಿದ್ದ ಮುಡಾ ಹಗರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಮೈಸೂರು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

Live Cricket

Add Your Heading Text Here