ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪಣೆಗೆ ಕ್ಷಣಗಣನೆ ಶುರುವಾಗಿದೆ. 70 ಎಕರೆಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ರಾಮರಾಜ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅಯೋಧ್ಯೆ ಮಧುವಣಗಿತ್ತಿಯಂತೆ ರೆಡಿಯಾಗಿದ್ದು, ಇಂದು ರಾಮಲಲ್ಲಾ ದರ್ಶನ ನೀಡಲಿದ್ದಾನೆ.
ಮಧ್ಯಾಹ್ನದ ಅಭಿಜಿನ್ ಲಗ್ನದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದ್ದು, ಪ್ರಧಾನಿ ಮೋದಿ ಅಯೋಧ್ಯೆ ರಾಮಮಂದಿರ ಉದ್ಘಾಟಿಸಲಿದ್ದಾರೆ. ಪ್ರಧಾನಿ ರಾಮನೂರಿನಲ್ಲಿ ಬರೋಬ್ಬರಿ 5 ಗಂಟೆ ಕಳೆಯಲಿದ್ದಾರೆ.
ಪ್ರಧಾನಿ ಮೋದಿ ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗಾಗಿ ಬೆಳಗ್ಗೆ 10.25ಕ್ಕೆ ಅಯೋಧ್ಯೆಯ ಏರ್ಪೋರ್ಟ್ಗೆ ಆಗಮಿಸಲಿದ್ದಾರೆ. ಇವತ್ತು ಆಯೋಧ್ಯೆಯಲ್ಲಿ 5 ಗಂಟೆಗಳ ಕಾಲ ಇರುವ ಮೋದಿ ವಿವಿಧ ಕಾರ್ಯಗಳನ್ನು ನೆರವೇರಿಸಿ ಮಧ್ಯಾಹ್ನ 3.30ಕ್ಕೆ ದೆಹಲಿಯತ್ತ ಪ್ರಯಾಣ ಬೆಳಸಲಿದ್ದಾರೆ.
ಬೆಳಗ್ಗೆ 10:25ಕ್ಕೆ ಅಯೋಧ್ಯೆಯ ಏರ್ಪೋರ್ಟ್ಗೆ ಆಗಮಿಸಿ 10:45ಕ್ಕೆ ರಾಮಮಂದಿರದ ಹೆಲಿಪ್ಯಾಡ್ಗೆ ತೆರಳಲಿದ್ದಾರೆ. ಅಲ್ಲಿಂದ ಬೆಳಗ್ಗೆ 10:55ಕ್ಕೆ ಸರಿಯಾಗಿ ರಾಮ ಜನ್ಮಭೂಮಿಗೆ ಆಗಮಿಸಲಿದ್ದಾರೆ. 11 ಗಂಟೆಯಿಂದ 12 ರವರೆಗೆ ಅಯೋಧ್ಯೆ ರಾಮಮಂದಿರವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಲಿದ್ದಾರೆ.
ಬಳಿಕ ಮಂದಿರದ ಕಾರ್ಮಿಕರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಮಧ್ಯಾಹ್ನ 12:05 ರಿಂದ 12:55 ರವರೆಗೆ ಮೋದಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಪ್ರಾಣ ಪ್ರತಿಷ್ಠಾಪನೆಯಲ್ಲಿ 50 ನಿಮಿಷಗಳ ಕಾಲ ಮೋದಿ ಯಜಮಾನನಾಗಿ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.
1 ರಿಂದ 2 ಗಂಟೆಗೆ ಮಂದಿರ ಆವರಣದಲ್ಲಿ ಆಯೋಜಿಸುವ ಸಾರ್ವಜನಿಕ ಸಭೆಯಲ್ಲಿ ಮಂದಿರವನ್ನು ಉದ್ದೇಶಿಸಿ ಭಾಷಣೆ ಮಾಡುವರು. 2:10ಕ್ಕೆ ಕುಬೇರ ತಿಲದ ಶಿವಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿ, ಕೊನೆಗೆ 3.30ರ ಸಮಯಕ್ಕೆ ಅಯೋಧ್ಯೆಯಿಂದ ಮೋದಿ ದೆಹಲಿಯತ್ತ ವಿಮಾನದ ಮೂಲಕ ಪ್ರಯಾಣ ಬೆಳಸಲಿದ್ದಾರೆ.
ಇದನ್ನೂ ಓದಿ : 500 ವರ್ಷಗಳ ಇತಿಹಾಸ ಮರು ಸೃಷ್ಟಿಗೆ ಕೌಂಟ್ಡೌನ್ : ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆ ಹೇಗಿರುತ್ತೆ..?