ಕನ್ನಡ ಚಲನಚಿತ್ರ ಕಲಾವಿದರು, ತಂತ್ರಜ್ಞರು, ಕಿರುತೆರೆ ಕಲಾವಿದರು ಹಾಗೂ ಮಾಧ್ಯಮದವರು ಒಟ್ಟಾಗಿ ಪಾಲ್ಗೊಳ್ಳುವ ಬ್ಯಾಡ್ಮಿಂಟನ್ ಕಪ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರು ಸ್ಯಾಂಡಲ್ವುಡ್ನ ಅನೇಕ ಕಾರ್ಯಕ್ರಮಗಳಿಗೆ ತೆರಳಿ ಬೆಂಬಲ ಸೂಚಿಸುತ್ತಾರೆ. ಇದೀಗ ‘ಸ್ಯಾಂಡಲ್ವುಡ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ಗೂ ಬೆಂಬಲವಾಗಿ ಸೂಚಿಸಿದ್ದಾರೆ.
ಜೆರ್ಸಿ ಅನಾವರಣ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇನ್ನು ಕಿಚ್ಚ ಸುದೀಪ್ ಇದ್ದಲ್ಲಿ ಹಾಸ್ಯಕ್ಕೆ ಕೊರತೆ ಏನಿಲ್ಲ ಎಂಬುದಕ್ಕೆ ಜೆರ್ಸಿ ಅನಾವರಣ ವೇಳೆ ಒಂದು ಘಟನೆ ನಡೆದಿದೆ.
ಜೆರ್ಸಿ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕಿಚ್ಚ ಸುದೀಪ್ ಅವರು ವೇದಿಕೆ ಏರುತ್ತಿದ್ದಂತೆ ಎಲ್ಲರನ್ನೂ ನಗಿಸಿದರು. ಆಗಲೇ ಸಮಯ ಮೀರಿತ್ತು. ಹೀಗಾಗಿ ‘ಎಲ್ಲರ ಗಮನ ಬಾರ್ ಕೌಂಟರ್ ಮೇಲೆ ಇದೆ’ ಎನ್ನುವ ಮೂಲಕ ಎಲ್ಲರಲ್ಲೂ ನಗು ಉಕ್ಕಿಸಿದರು.
ಇದನ್ನೂ ಓದಿ : 102 ದಿನದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ದರ್ಶನ್..!
Post Views: 7