ಬೆಂಗಳೂರು : ನಾಡಿನೆಲ್ಲೆಡೆ ಇಂದು ಸಂಕ್ರಾಂತಿಯ ಸುಗ್ಗಿ ಜೋರಾಗಿದೆ. ಎಲ್ಲೆಲ್ಲೂ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸುಗಳ ರಾಶಿ. ಮತ್ತೊಂದೆಡೆ ಸಿದ್ಧಪಡಿಸಿದ ಎಳ್ಳು-ಬೆಲ್ಲ, ಹಾಗೆಯೇ ಎಳ್ಳು-ಬೆಲ್ಲ ತುಂಬಿಕೊಡುವ ಬಗೆ ಬಗೆಯ ಗಿಫ್ಟ್ ಬಾಕ್ಸ್ಗಳು. ಗ್ರಾಹಕರ ಚೌಕಾಸಿಯೊಂದಿಗೆ ಖರೀದಿಯ ಸಂಭ್ರಮ ಜೋರಾಗಿಯೇ ಇದೆ.
ಮಾರುಕಟ್ಟೆಯಲ್ಲಿ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಮಲ್ಲೇಶ್ವರ, ಕೆ.ಆರ್.ಮಾರುಕಟ್ಟೆ, ಗಾಂಧಿಬಜಾರ್, ಯಶವಂತಪುರ, ಬಸವನಗುಡಿ, ಜಯನಗರ, ವಿಜಯನಗರ, ದಾಸರಹಳ್ಳಿ, ಮಡಿವಾಳ, ಕೆ.ಆರ್.ಪುರಂ ಮಾರುಕಟ್ಟೆಗಳಲ್ಲಿ ಹಬ್ಬದ ಕಳೆ ರಂಗೇರಿದೆ.
ಹಬ್ಬದ ಕಾರಣದಿಂದಾಗಿ ಕಬ್ಬು, ಹೂವು, ಹಣ್ಣುಗಳ ಬೆಲೆ ತುಸು ಏರಿಕೆಯಾಗಿದೆ. ಹೀಗಾಗಿ ವ್ಯಾಪಾರಸ್ತರು ಲಾಭದ ನೀರಿಕ್ಷೆಯಲ್ಲಿದ್ದಾರೆ. ಸದ್ಯ ಯಾವುದರ ಬೆಲೆ ಎಷ್ಟಿದೆ ಅನ್ನೋ ಸಂಪೂರ್ಣ ವಿವರ ಇಲ್ಲಿದೆ ನೋಡಿ.
- ಸಿದ್ಧ ಎಳ್ಳು ಬೆಲ್ಲ ಕೆಜಿ : ₹250 ರಿಂದ ₹300
- ಸಕ್ಕರೆ ಅಚ್ಚು :₹250 ರಿಂದ ₹300
- ಬಿಳಿ ಕಬ್ಬು ಜೋಡಿಗೆ :₹80 ರಿಂದ ₹120
- ಕಪ್ಪು ಕಬ್ಬು ಜೋಡಿಗೆ :₹120 ರಿಂದ ₹180
- ಅವರೆಕಾಯಿ :₹80 ರಿಂದ ₹100
- ಏಲಕ್ಕಿ ಬಾಳೆ ಹಣ್ಣು :₹100 ರಿಂದ ₹120
- ಸೇಬು :₹120 ರಿಂದ ₹180
- ಚೆಂಡು ಹೂವು ಕೆಜಿ :₹150 ರಿಂದ ₹180
ಇದನ್ನೂ ಓದಿ : ನಾಡಿನೆಲ್ಲೆಡೆ ಇಂದು ಸಂಕ್ರಾತಿ ಹಬ್ಬದ ಸಂಭ್ರಮ..!
Post Views: 279