ರಾಮನಗರ : ಮುಡಾ ನಿವೇಶನ ಹಂಚಿಕೆ ಹಗರಣ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೂಡಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಆಗ್ರಹಿಸಿ BJP-JDSನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಡಿಕೆಶಿ ವಿರುದ್ಧ ಹೆಚ್ಡಿಕೆ ಮತ್ತೆ ಕಿಡಿಕಾರಿದ್ದಾರೆ.
ಈ ಬಗ್ಗೆ ರಾಮನಗರದಲ್ಲಿ ಹೆಚ್ಡಿಕೆ ಮಾತನಾಡಿ, ರಾಮನಗರಕ್ಕೆ ನಮ್ಮ ಫ್ಯಾಮಿಲಿ ಈಗ ಬಂದಿದ್ದಲ್ಲ, 1983ರಿಂದಲೂ ಇಲ್ಲಿ ರಾಜಕಾರಣ ಮಾಡ್ತಿದ್ದೇವೆ. ಅವತ್ತು ನಮ್ಮ ತಂದೆಯ ಕೃಪೆಯಿಂದ ನೀವು ಗೆದ್ದಿದ್ರಿ. ಸಾತನೂರು ಎಲೆಕ್ಷನ್ ನೆನಪಿದೆಯಾ ಡಿಕೆಶಿ ಎಂದು ಹೆಚ್ಡಿಕೆ ಪ್ರಶ್ನಿಸಿ, ನಮ್ಮ ಅಪ್ಪನ ಆಸ್ತಿ ಎಷ್ಟಿತ್ತು ಅಂತಾ ಕೇಳಿದ್ದೀರಿ. ನಾವು ನಿಮ್ಮಂತೆ ಊರುಗಳನ್ನು ಹಾಳು ಮಾಡಿ ಬೆಳೆದಿಲ್ಲ,
ನಾನು ಓದುವಾಗಲೇ 3 ಪಾಲಿಕೆ ಕಸದ ಲಾರಿ ಇಟ್ಟುಕೊಂಡಿದ್ದೆ ಎಂದಿದ್ದಾರೆ.
ಕೇತಗಾನಹಳ್ಳಿ ಭೂಮಿ ಸಿನಿಮಾದಿಂದ ದುಡಿದಿದ್ದು, ಕನಕಪುರದಲ್ಲಿ ಯಾವ ಗ್ರಾಮಕ್ಕೆ ಏನ್ ಸ್ಥಿತಿ ತಂದಿದ್ದೀರಿ ನನಗೆ ಗೊತ್ತು. ನಾನು ಕೃಷಿ ಮಾಡಿಯೇ ದುಡಿಯುತ್ತಿದ್ದೇನೆ, ನನ್ನ ಆಸ್ತಿ ಬಗ್ಗೆ ಬಹಿರಂಗ ಚರ್ಚೆಗೆ ಮುಂದೆ ಬರೋಣಂತೆ. ಈಗ ಸರ್ಕಾರದ ಹಗರಣಗಳ ಬಗ್ಗೆ ಮಾತ್ನಾಡಿ ಎಂದು ಹೆಚ್ಡಿಕೆ ಗುಡುಗಿದ್ದಾರೆ. ಹೆಚ್ಡಿಕೆ ಜೊತೆ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿಎಸ್ವೈ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಜೈಲಿನಲ್ಲಿರೋ ದಾಸನನ್ನ ಎಷ್ಟು ಜನ ಭೇಟಿಯಾಗಿದ್ದಾರೆ, ಯಾರ್ಯಾರು ಗೊತ್ತಾ? – ಇಲ್ಲಿದೆ ಲಿಸ್ಟ್..!