Download Our App

Follow us

Home » ಅಪರಾಧ » ವಾಲ್ಮೀಕಿ ಹಗರಣ ಕೇಸ್ – ಶಾಸಕ ದದ್ದಲ್​ ಮಾಜಿ PA ಪಂಪಣ್ಣ ಅರೆಸ್ಟ್..!

ವಾಲ್ಮೀಕಿ ಹಗರಣ ಕೇಸ್ – ಶಾಸಕ ದದ್ದಲ್​ ಮಾಜಿ PA ಪಂಪಣ್ಣ ಅರೆಸ್ಟ್..!

ರಾಯಚೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ರಾಜ್ಯದ ಹಲವೆಡೆ ದಾಳಿ ಮಾಡಿದ್ದಾರೆ. ಮಾಜಿ ಸಚಿವ ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್ ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ನಂತರ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಹರೀಶ್​​ನ್ನೂ​ ಅರೆಸ್ಟ್​ ಮಾಡಿದ್ದರು. ಇದರ ಬೆನ್ನಲ್ಲೇ ಶಾಸಕ ದದ್ದಲ್​ ಮಾಜಿ PA ಪಂಪಣ್ಣನ್ನು ಅರೆಸ್ಟ್​ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸತತ ವಿಚಾರಣೆ ನಡೆಸಿದ ಬಳಿಕ ಪಂಪಣ್ಣನ್ನು ರಾಯಚೂರಿನ ನಿವಾಸದಲ್ಲೇ ED ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಪಂಪಣ್ಣ ನಿವಾಸದಲ್ಲಿದ್ದ ಸ್ಕ್ಯಾನರ್​, ಪ್ರಿಂಟರ್​​ನ್ನು ಇಡಿ​ ಸೀಜ್​ ಮಾಡಿದ್ದು, 2 ಬ್ಯಾಗ್​ ದಾಖಲೆ ಸಮೇತ ಪಂಪಣ್ಣ ಅರೆಸ್ಟ್​ ಮಾಡಿದೆ.

ಇಡಿ ರೇಡ್​ ಬಳಿಕ ನಾಪತ್ತೆಯಾಗಿದ್ದ ದದ್ದಲ್​ ಮಾಜಿ PA ಪಂಪಣ್ಣನ್ನು ರಾಯಲ್​ಫೋರ್ಟ್​ ಅಪಾರ್ಟ್​ಮೆಂಟ್​ನಲ್ಲಿ ಇಡಿ ಅರೆಸ್ಟ್​ ಮಾಡಿದೆ. ನಿನ್ನೆಯಿಂದಲೂ ED ಪಂಪಣ್ಣನನ್ನ ಎನ್​ಕ್ವೈರಿ ಮಾಡ್ತಿತ್ತು, ಕೊನೆಗೂ ದದ್ದಲ್​ ಮಾಜಿ PA ಪಂಪಣ್ಣನ್ನು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ : ರಾಮನಗರ ಹೆಸರು ಬದಲಿಸುವ ಸಾಹಸಕ್ಕೆ ಕೈಹಾಕಿದ್ರೆ ಸರಿಯಿರಲ್ಲ : ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ವಾರ್ನಿಂಗ್..!

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here