ಬೆಂಗಳೂರು : ಹೆತ್ತ ಮಗುವನ್ನೇ ಕೊಂದ ತಾಯಿ ಪ್ರಕರಣ ಸಂಬಂಧ ಹಿರಿಯೂರಿನಿಂದ ಬೆಂಗಳೂರು ರಾಜಾಜಿನಗರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ವೈದ್ಯ ಕುಮಾರ್ ನಾಯ್ಕ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಟೆಸ್ಟ್ ನಡೆದಿದ್ದು, ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಮಗುವಿನ ದೇಹದ ಮೇಲೆ ಯಾವುದೇ ಗಾಯದ ಗುರುತಿಲ್ಲ, ಉಸಿರು ನಿಲ್ಲುವ ಸಮಯದಲ್ಲಿ ಮೂಗು, ಬಾಯಲ್ಲಿ ರಕ್ತ ಬಂದಿದೆ. ಮಗುವಿನ ಮುಖ & ಎದೆ ಭಾಗದಲ್ಲಿ ಊತ ಬಂದಿದೆ, ಕೊಲೆ ನಡೆಯುವ ವೇಳೆ ಮಗು ಒದ್ದಾಡಿರುವುದು ತಿಳಿದಿದೆ ಎಂದು ಹಿರಿಯೂರು ಸಾರ್ವಜನಿಕ ಆಸ್ಪತ್ರೆ ವೈದ್ಯ ರಂಗೇಗೌಡ ಹೇಳಿದ್ದಾರೆ.
ಸುಚನಾ ಸೇಠ್ ಮಗನನ್ನು ಗೋವಾ ರೂಂನಲ್ಲಿ ಕೊಲೆ ಮಾಡಿ, ಸೂಟ್ಕೇಸ್ನಲ್ಲಿ ಶವ ತುಂಬಿದ್ದಳು. ಬೆಂಗಳೂರಿಗೆ ಟ್ಯಾಕ್ಸಿಯಲ್ಲೇ ಸೂಟ್ಕೇಸ್ ತರುತ್ತಿದ್ದಳು. ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸರು ಗೋವಾದಿಂದ ಬರ್ತಿದ್ದ ಟ್ಯಾಕ್ಸಿ ತಪಾಸಣೆ ಮಾಡಿದ್ದಾರೆ. ಪೊಲೀಸರು ಮೈಂಡ್ ಫುಲ್ AI ಆ್ಯಪ್ ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಆಗಿರುವ ಸುಚನಾ ಸೇಠ್ನ್ನು ವಶಕ್ಕೆ ಪಡೆದಿದ್ದಾರೆ.
ಸುಚನಾ ಸೇಠ್ ಗೋವಾ ಹೋಟೆಲ್ನಲ್ಲಿದ್ದು, ಹಳೆ ಪತಿ ಇದೇ ಹೋಟೆಲ್ ರೂಂಗೆ ಬರ್ತಾ ಇದ್ದ. ಹಳೆ ಪತಿಗೆ ಮಗು ಇರೋದು ಗೊತ್ತಾಗುತ್ತೆ ಅಂತಾ ಕೊಲೆ ಮಾಡಿದ್ದಾರೆ. ಹೋಟೆಲ್ ರೂಮಿನಲ್ಲಿ ರಕ್ತದ ಕಲೆಗಳು ಪತ್ತೆ ಆಗಿದ್ದವು.
ಇನ್ನು ಹೋಟೆಲ್ ಸಿಬ್ಬಂದಿ ಗೋವಾ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ನಂಬರ್ ಹುಡುಕಿ ಸುಚನಾ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಡ್ರೈವರ್ಗೆ ಕರೆ ಮಾಡಿದ್ದಾರೆ. ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಚಾಲಕ ಟ್ಯಾಕ್ಸಿ ನಿಲ್ಲಿಸಿದ್ದು ಐಮಂಗಲ ಪೊಲೀಸರಿಗೆ ಆರೋಪಿ ಸುಚನಾಳನ್ನು ಒಪ್ಪಿಸಿದ್ದಾರೆ.