ದಾವಣಗೆರೆ : ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಕೇಸ್ ಸಂಬಂಧ DySP ಪ್ರಶಾಂತ್ ಮುನ್ನಾಳಿ ಹಾಗೂ CPI ನಿರಂಜನ್ ಅವರನ್ನು ಅಮಾನತು ಮಾಡಲಾಗಿದೆ. ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ.
FIR ಹಾಕ್ದೇ ಠಾಣೆಗೆ ಕರೆತಂದಿದ್ದು ತಪ್ಪು ಎಂದು ಸಸ್ಪೆಂಡ್ ಮಾಡಿದ್ದಾರೆ. ಆದಿಲ್ಗೆ ಮೂರ್ಛೆ ರೋಗ ಇತ್ತು, ಹೀಗಾಗಿ ಠಾಣೆಯಲ್ಲಿ ಕುಸಿದು ಬಿದ್ದಿದ್ದ. ಆದಿಲ್ ವಿರುದ್ಧ ಮಟ್ಕಾ ದಂಧೆಯಲ್ಲಿ ಮೂರು ಪ್ರಕರಣ ದಾಖಲಾಗಿದ್ದವು, ಹಾಗಾಗಿ ಪೊಲೀಸರು ನಿನ್ನೆ ಮಟ್ಕಾ ಕೇಸ್ ನಲ್ಲಿ ಅದಿಲ್ನನ್ನು ಠಾಣೆಗೆ ಕರೆಸಿದ್ದರು. ನಂತರ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿದ್ದ ಆರೋಪಿ ಆದಿಲ್ ಸಾವನ್ನಪ್ಪಿದ್ದಾನೆ. ಇದೀಗ ಮೃತನ ಕುಟುಂಬಸ್ಥರು ಲಾಕಪ್ ಡೆತ್ ಆರೋಪ ಮಾಡುತ್ತಿದ್ದಾರೆ.
ಆದಿಲ್ ಸಾವಿಗೆ ಪೊಲೀಸರೇ ಕಾರಣವೆಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ನೂರಾರು ಮಂದಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಜನರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಇದನ್ನೂ ಓದಿ : ಇಲ್ಲೀಗಲ್ ಆಗಿ IAS ಅಧಿಕಾರಿ ಕಾಲ್ ಡೀಟೇಲ್ಸ್ ತೆಗೆದ ಕೇಸ್ : ನಿವೃತ್ತ IPS ಅಧಿಕಾರಿ ಸುರೇಶ್ ವಿರುದ್ದ FIR ದಾಖಲು..!