ಬೆಂಗಳೂರು : ರಾಜ್ಯದ 14 ಕ್ಷೇತ್ರಗಳ ಮೊದಲನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಿದೆ. ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇದಾಗಿದ್ದು, ಮತದಾರರು ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನಿಂದ ಮತ ಚಲಾಯಿಸುತ್ತಿದ್ದಾರೆ. ಇದರ ನಡುವೆ ಶಾಂತಿನಗರ ವಿಧಾನಸಭಾ ಕ್ಷೇತ್ರದ 38ನೇ ಮತಗಟ್ಟೆಯ ಕೂದಲಳತೆ ದೂರದಲ್ಲಿ ಬೃಹತ್ ಮರವೊಂದು ನೆಲಕ್ಕುರುಳಿದ ಘಟನೆ ನಡೆದಿದೆ.
ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದ ಮತಗಟ್ಟೆ ಸಮೀಪದಲ್ಲಿ ನೋಡ ನೋಡುತ್ತಲೇ ಬೃಹತ್ ಮರ ನೆಲಕ್ಕುರುಳಿದೆ. ಬುಡ ಸಮೇತ ಕಿತ್ತು ಬಂದು ಮರ ಪಕ್ಕದಲ್ಲೇ ಇದ್ದ ಮಾರುತಿ ಕಾರ್ ಬೋನೆಟ್ಗೆ ಬಿದ್ದಿದೆ. ಇನ್ನು ಘಟನೆಯಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ.
ಇದನ್ನೂ ಓದಿ : ಉಡುಪಿಯಲ್ಲಿ ಅಷ್ಟ ಮಠಾಧೀಶರಿಂದ ಮತದಾನ..!
Post Views: 47