ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ನಲ್ಲಿ ದಿನ ನಿತ್ಯ ಸಾವಿರಾರು ಜನರು ಒಡಾಡ್ತಾರೆ. ಕಾಲಿಡಲು ಜಾಗವಿಲ್ಲದಷ್ಟು ಬ್ಯುಸಿ ಏರಿಯಾದಲ್ಲಿ ರಾತ್ರಿಹಗಲು ಖಾಸಗಿ ಬಸ್ಗಳ ದರ್ಬಾರ್ ನಡೆಯುತ್ತಿತ್ತು. ಆದರೆ ಮೊನ್ನೆ ಬಸ್ ಹೊತ್ತಿದ ಪ್ರಕರಣ ಹಿಂದೆ ಬಿದ್ದ ಬಿಟಿವಿಗೆ ದಶಕಗಳಿಂದ ಮೆಜೆಸ್ಟಿಕ್ನಲ್ಲಿ ನಡೆಯುತ್ತಿರುವ ಖಾಸಗಿ ಬಸ್ಸ್ಗಳ ಪಾರ್ಕಿಂಗ್ ದಂಧೆ ವಿಚಾರ ತಿಳಿದು ಬಂದಿತ್ತು. ಆದರೆ ಇದೀಗ ಸತತ ಕಾರ್ಯಚರಣೆ ನಡೆಸಿ ಕೊನೆಗೂ ಖಾಸಗಿ ಬಸ್ ಮಾಫಿಯಾಗೆ ಬಿಟಿವಿ ಮೂಗುದಾರ ಹಾಕಿದೆ.
ಹೌದು, ಖಾಸಗಿ ಬಸ್ ಮಾಫಿಯಾ ಜೊತೆ ಖುದ್ದು ಪೊಲೀಸರ ಶಾಮೀಲಾಗಿದ್ದರು. ಬೆಳಗ್ಗೆ ಬಸ್ ನಿಲ್ಲಿಸಿದ್ಮೇಲೆ ಬಸ್ಗಳಲ್ಲಿ ಸಿಬ್ಬಂದಿ ಮಾಡಿದ್ದೇ ದರ್ಬಾರ್. ಖಾಸಗಿ ಬಸ್ನಲ್ಲೇ ಬಾರ್, ರೆಸ್ಟೋರೆಂಟ್, ಲಾಡ್ಜ್ಗಳು. ಅಷ್ಟೇ ಅಲ್ಲದೇ ನೋ ಪಾರ್ಕಿಂಗ್ ಸ್ಥಳದಲ್ಲಿ ಬಸ್ ಪಾರ್ಕ್ ಮಾಡಿ ರಸ್ತೆ ಬದಿಯಲ್ಲೇ ಖಾಸಗಿ ಬಸ್ ರಿಪೇರಿ ಮಾಡುವುದರಿಂದ ರಸ್ತೆಯಲ್ಲಿ ಆಯಿಲ್ಗಳು ಹರಿದಾಡುತ್ತಿತ್ತು. ಆಯಿಲ್ ಬಿದ್ದ ರಸ್ತೆಯಲ್ಲಿ ನೂರಾರು ಬೈಕ್ ಸವಾರರು ಸ್ಕಿಡ್ ಆಗಿ ಸಾವು-ನೋವು ಸಂಭವಿಸಿದೆ. ಆದರೆ ಖಾಸಗಿ ಬಸ್ಗಳ ಆಟಾಟೋಪದಿಂದ ಸಾವನ್ನಪ್ಪಿದವರ ರೆಕಾರ್ಡ್ ಸಿಗುತ್ತಿರಲಿಲ್ಲ. ಯಾಕಂದ್ರೆ ಪೊಲೀಸರು ಕೇಸ್ ಮುಚ್ಚಿ ಹಾಕುತ್ತಿದ್ದರು. ಈ ಘಟನೆಗಳಿಗೆ ಪ್ರಮುಖ ಕಾರಣ ಬಸ್ ಮಾಲೀಕರ ಜೊತೆ ಪೊಲೀಸರ ಅಡ್ಜಸ್ಟ್ಮೆಂಟ್.
ಪೊಲೀಸರೇ ಹಲವು ಬಸ್ ಕಂಪನಿಗಳಿಂದ 1-2 ಕೋಟಿ ಲಂಚ ವಸೂಲಿ ಮಾಡುತ್ತಿರುವ ಆಡಿಯೋ ಬಿಟಿವಿಗೆ ಲಭ್ಯವಾಗಿತ್ತು. ಇಷ್ಟೇ ಅಲ್ಲದೇ ಮೆಜೆಸ್ಟಿಕ್ನಲ್ಲಿ ನಡೆಯುತ್ತಿದ್ದ ಹಲವು ಘಟನೆಗಳ ಬಗ್ಗೆ ಸಾರ್ವಜನಿಕರು ಬಿಟಿವಿಗೆ ನೂರಾರು ವಿಡಿಯೋಗಳನ್ನು ರವಾನೆ ಮಾಡಿದ್ದರು. ಈ ವಿಡಿಯೋಗಳ ಬೆನ್ನತ್ತಿದ್ದ ಬಿಟಿವಿಗೆ ಮಜೆಸ್ಟಿಕ್ನಲ್ಲಿ ನಿತ್ಯ ನಡೆಯುತ್ತಿದ್ದ ನರಕದ ಕರಾಳ ದೃಶ್ಯ ಬಯಲಾಗಿತ್ತು.
ಇದೀಗ, ಬಿಟಿವಿ ಕಾರ್ಯಾಚರಣೆಗೆ ಬೆಚ್ಚಿಬಿದ್ದ ಲಂಚಕೋರ ಪೊಲೀಸರು ಸುತ್ತಮುತ್ತ ಬಸ್ ನಿಲ್ಲಿಸದಂತೆ ಮೆಸೇಜ್ ರವಾನೆ ಮಾಡಿದ್ದಾರೆ. ಬೆಂಗಳೂರು ಇತಿಹಾಸದಲ್ಲಿಯೇ ಅತಿ ದೊಡ್ಡ ಇಂಪ್ಯಾಕ್ಟ್ ಎಂಬಾಂತೆ 24 ಗಂಟೆಗಳಲ್ಲೇ ಖಾಸಗಿ ರೌಡಿಸಂಗೆ ಬಿಟಿವಿ ಅಂತ್ಯ ಹಾಡಿದೆ. ಇಷ್ಟು ದಿನ ಮೆಜೆಸ್ಟಿಕ್ನ ರೋಡ್ಗಳಲ್ಲಿ ಖಾಸಗಿ ಬಸ್ಗಳ ಸಾಮ್ರಾಜ್ಯ ನಡೆಯುತ್ತಿತ್ತು. ಆದರೆ ಇಂದು ಮೆಜೆಸ್ಟಿಕ್ಗೆ ನರಕ ಸೃಷ್ಟಿಸಿದ್ದ ಖಾಸಗಿ ಬಸ್ಗಳಿಂದ ಮುಕ್ತಿ ದೊರೆತಿದೆ. ಮೊದಲ ಬಾರಿಗೆ ಜನರು ಕ್ಲೀನ್ & ಫ್ರೀ ಮೆಜೆಸ್ಟಿಕ್ ನೋಡುವಂತಾಗಿದೆ.
ಇದನ್ನೂ ಓದಿ : ದೇವೇಗೌಡರ ಮೊಮ್ಮಗನ ಸೋಲಿಸಲು ಮಾಸ್ಟರ್ ಪ್ಲಾನ್ – ಇಂದು ದಳಪತಿಗಳ ಕೋಟೆಯಲ್ಲಿ ಸಿದ್ದು, ಡಿಕೆಶಿ ಅಬ್ಬರದ ಪ್ರಚಾರ..!