ಬೆಂಗಳೂರು : ಲೋಕಸಭೆ ಚುನಾವಣೆಯ ಮೊದಲನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಖಾಡವನ್ನು ಸಿದ್ದಗೊಳಿಸುತ್ತಿದೆ. ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಇನ್ನುಳಿದ 14 ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ. ಇದೀಗ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಡಿಸಿಎಂ ಡಿಕೆ ಶಿವಕುಮಾರ್ ಶಾಸಕ ಮುನಿರತ್ನಗೆ ಠಕ್ಕರ್ ಕೊಡಲು ಮುಂದಾಗಿದ್ದಾರೆ.
ಇಂದು ಆರ್.ಆರ್.ನಗರದ ಅಖಾಡಕ್ಕೆ ಡಿಕೆಶಿ ಎಂಟ್ರಿ ಕೊಡಲಿದ್ದಾರೆ. ಬೆಳಗ್ಗೆ 11ಗಂಟೆಯಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಲಿರುವ ಡಿಕೆಶಿ ಆರ್.ಆರ್.ನಗರದಲ್ಲಿ ಡೋರ್ TO ಡೋರ್ ವಿಸಿಟ್ ಮಾಡಿ ಸೋದರ ಡಿ.ಕೆ.ಸುರೇಶ್ ಗೆಲ್ಲಿಸಲು ಮೆಗಾ ಪ್ಲಾನ್ ರೆಡಿ ಮಾಡಲಿದ್ದಾರೆ.
ಇನ್ನು ಆರ್.ಆರ್.ನಗರದಲ್ಲೇ ಕಾಂಗ್ರೆಸ್ಗೆ ಭಾರೀ ಲೀಡ್ ಕೊಡಿಸಲು ತಂತ್ರ ರೂಪಿಸುವ ಡಿಕೆಶಿ, ಸಂಜೆವರೆಗೂ ಆರ್.ಆರ್.ನಗರದಲ್ಲಿ ಸಂಚಾರ ಮಾಡಲಿದ್ದಾರೆ. ಬಿಜೆಪಿ ಪರ ಪ್ರಚಾರದ ಮುಂದಾಳತ್ವ ವಹಿಸಿರುವ ಶಾಸಕ ಮನಿರತ್ನ ಅವರಿಗೆ ತಮ್ಮ ಕ್ಷೇತ್ರದಲ್ಲೇ ಮುಖಭಂಗ ಉಂಟು ಮಾಡಲು ಡಿಕೆಶಿ ರಣತಂತ್ರ ರೂಪಿಸುತ್ತಿದ್ದಾರೆ. ಇದೇ ವೇಳೆ ಡಿಕೆಶಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಲಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆ : ವ್ಯಕ್ತಿಯ ಮೇಲೆ ಬೀದಿ ನಾಯಿಗಳಿಂದ ದಾಳಿ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!